newsics.com
ನಟಿ ರಚಿತಾ ರಾಮ್ ಬಗ್ಗೆ ಲಾಯರ್ ಜಗದೀಶ್ ಗಂಭೀರ ಆರೋಪಗಳನ್ನ ಮಾಡಿದ್ರು. ಸದ್ಯ ಈ ಆರೋಪಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಲಾಯರ್ ಜಗದೀಶ್ ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ರಚಿತಾ ರಾಮ್ ,
ಒಂದು ವೇಳೆ ಕಷ್ಟಬಂದು ನಾನು ಎಲ್ಲಾ ಕಳೆದುಕೊಂಡರೆ ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುತ್ತೇನೆಯೇ ಹೊರತು ಯಾರ ಜೊತೆಯೂ ಹೋಗಿ ಇರುವವಳಲ್ಲ, ಅಲ್ಲದೇ, ನಾನು ನಂಬಿರೋದು ನನ್ನ ಕೆಲಸವನ್ನು ಎಂದಿದ್ದಾರೆ.
ನಾನು ಏನೆಂದು ನನ್ನ ಜೊತೆ ಇರುವವರಿಗೆ ಗೊತ್ತಿದೆ. ನನಗೆ ಇಷ್ಟೊಂದು ಸ್ಪಾನ್ಸರ್ ಅಂತ ಇದ್ದಿದ್ರೆ ನಾನ್ಯಾಕೆ ಕಷ್ಟಪಟ್ಟು 12 ವರ್ಷ ಕೆಲಸ ಮಾಡಬೇಕಿತ್ತು. ನೆಮ್ಮದಿಯಾಗಿ, ಖುಷಿಯಾಗಿ ಬೇಕಾದ ದೇಶ ಸುತ್ತಿಕೊಂಡು ಒಂದೆರಡು ಸಿನಿಮಾ ಮಾಡಿಕೊಂಡು ಇರುತ್ತಿದ್ದೆ. ಭಗವಂತನೇ ನನ್ನ ಜೀವನದಲ್ಲಿ ಒಳ್ಳೆಯ ಸ್ಪಾನ್ಸರ್ . ನನಗೆ ಜೀವನದಲ್ಲಿ ಕಷ್ಟಬಂದು ಎಲ್ಲಾ ಕಳೆದುಕೊಂಡೆ ಅಂದಾಗಲೂ, ದೇವಸ್ಥಾನದಲ್ಲಿ ಹೋಗಿ ಕೆಲಸ ಮಾಡಿ, ಅಲ್ಲಿ ಕೊಟ್ಟ ಪ್ರಸಾದ ತಿಂದುಕೊಂಡು ಇರುತ್ತೇನೆಯೇ ಹೊರತು, ಯಾರ ಜೊತೆಯೂ ಹೋಗಿ ಇರುವವಳಲ್ಲ. ಇದು ನಮ್ಮ ಅಪ್ಪ-ಅಮ್ಮ ಹೇಳಿಕೊಟ್ಟಿರುವಂಥದ್ದು’ ಎಂದು ಖಡಕ್ ಆಗಿ ಹೇಳಿದ್ದಾರೆ.
ಲಾಯರ್ ಜಗದೀಶ್ ಮಾಡಿದ ಆರೋಪ?
ಬಿಗ್ ಬಾಸ್ ಮೂಲಕ ಗಮನ ಸೆಳೆದ ಜಗದೀಶ್ ಅವರು ಇತ್ತೀಚೆಗೆ ಮಾಧ್ಯಮಗಳ ಎದುರು ಬಂದು ವಿವಿಧ ವ್ಯಕ್ತಿಗಳ ಬಗ್ಗೆ ವಿವಿಧ ರೀತಿಯ ಆರೋಪಗಳನ್ನು ಮಾಡುತ್ತಾ ಇದ್ದಾರೆ. ಅವರು ರಚಿತಾ ರಾಮ್ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಒಂದನ್ನು ನೀಡಿದ್ದರು. ‘ರಚಿತಾ ರಾಮ್ ಅವರಿಗೆ ರಾಜಕಾರಣಿಗಳ ಜೊತೆ ಒಡನಾಟ ಇದೆ. ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಾರೆ. ರಾಜಕಾರಣಿಗಳ ಕೃಪಾಕಟಾಕ್ಷದಿಂದ ಬೆಳೆಯುತ್ತಿದ್ದಾರೆ ಎಂಬ ಆರೋಪ ಇದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಆರೋಪ ಬಂದಮೇಲೆ ಅವರ ಟೆಂಪಲ್ ರನ್ ಹೆಚ್ಚಿದೆ’ ಎಂದು ಜಗದೀಶ್ ಹೇಳಿದ್ದರು.