newsics.com
ಕಾರವಾರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಹೆಸರಲ್ಲಿ ಅವರ ಭಾವ ಮಂಜುನಾಥ್ ಪೂಜೆ ಸಲ್ಲಿಸಿದ್ದಾರೆ.
ಕಾರವಾರದ ಕೈಗಾ ರಾಮಲಿಂಗೇಶ್ವರ ದೇಗುಲದಲ್ಲಿ ಈ ಪೂಜೆ ನಡೆದಿದೆ. ದರ್ಶನ್ ಹೆಸರಿನಲ್ಲಿ ಅರ್ಚನೆ ಹಾಗೂ ಅಭಿಷೇಕ ಮಾಡಿಸಲಾಗಿದೆ. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಹೊರಬರುವಂತೆ ಪೂಜೆ ಪ್ರಾರ್ಥಿಸಿದ್ದಾರೆ.
ಆದರೆ ಅರ್ಚಕ ಶ್ರೀಪಾದ ಭಟ್ ಪ್ರಕಾರ, ಸದ್ಯ ನಟ ದರ್ಶನ್ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ. ಮನುಷ್ಯನಿಗೆ ಜೀವತಾವಧಿಯಲ್ಲಿ ಶನಿ ಪಿಡೆ ಅನ್ನೋದು ಬರುತ್ತದೆ. ಈ ವೇಳೆ ದೋಷ ನಿವಾರಣೆ ಆಗಲಿ ಎಂದು ಶಿವನಿಗೆ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ದರ್ಶನ್ಗೆ ಕೋಪ ಜಾಸ್ತಿ.ಅವರು ಸುಮ್ಮನಿದ್ದರೂ, ಕೆಲವರು ಅವರನ್ನು ಸುಮ್ಮನೆ ಕೂರಲು ಬಿಡಲ್ಲ. ಈ ಘಟನೆಯಲ್ಲಿ ಪವಿತ್ರಾ ಗೌಡ ಅವರೇ ಕಾರಣ ಎಂದು ನಾನು ಹೇಳಲ್ಲ ಎಂದಿದ್ದಾರೆ ಮಂಜುನಾಥ್.
ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ