newsics.com
ಯಲ್ಲಾಪುರ(ಉತ್ತರ ಕನ್ನಡ): ತಾಲೂಕಿನ ಹಿತ್ಲಳ್ಳಿ ಬಳಿಯ ಪುರಲೆಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಚಿರತೆ ಓಡಾಟ ನಡೆಸಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಶನಿವಾರ ರಾತ್ರಿ ಹಿತ್ಲಳ್ಳಿಯಿಂದ ಚವತ್ತಿ ಕಡೆಗೆ ಹೋಗುವ ದಾರಿಯಲ್ಲಿ ರಾತ್ರಿ 9.30ರ ಹೊತ್ತಿಗೆ ಪಂಚಾಯತ್ ಸದಸ್ಯ ಪ್ರಸನ್ನ ಭಟ್ ಅವರ ಕಾರಿಗೆ ದಾರಿಯಲ್ಲಿ ಚಿರತೆ ಅಡ್ಡ ಬಂದಿತ್ತು.
ಅದೇ ರೀತಿ ಭಾನುವಾರ ಪುರಲೆಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೂ ಚಿರತೆ ಕಾಡಿನ ಮಧ್ಯರಸ್ತೆಯಲ್ಲಿ ಸಂಚರಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಭಾಗದ ಅರಣ್ಯಾಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆಹಿಡಿದು ಬೇರೆ ಕಡೆಗೆ ರವಾನೆ ಮಾಡಬೇಕು, ಅಥವಾ ಸಂರಕ್ಷಿತ ಅರಣ್ಯಕ್ಕೆ ಚಿರತೆಯನ್ನು ಬಿಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
BJP Source ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿಗೆ ದೇವೇಂದ್ರ ಫಡ್ನವಿಸ್ ಹೆಸರು ಅಂತಿಮ
Maharashtra Claimax ಮಹಾರಾಷ್ಟ್ರ ಸಿಎಂ ಹೆಸರು ಇಂದು ಘೋಷಣೆ: ಏಕನಾಥ್ ಶಿಂಧೆ ಹೇಳಿಕೆ