newsics.com
11ನೇ ಕನ್ನಡ ಬಿಗ್ ಬಾಸ್ನಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ತಾಳ್ಮೆ ಜತೆಗೆ ತನ್ನ ಒಳ್ಳೆಯ ವ್ಯಕ್ತಿತ್ವದಿಂದ ಜನರ ಮನಸ್ಸು ಗೆದ್ದಿದ್ದ ಧರ್ಮ ಕೀರ್ತಿರಾಜ್ ಮನೆಯಿಂದ ಹೊರಬಂದಿದ್ದಾರೆ.
ಅತಿ ಕಡಿಮೆ ವೋಟ್ ಪಡೆದ ಕಾರಣ ಧರ್ಮ ಕೀರ್ತಿರಾಜ್ ಮನೆಯಿಂದ ಔಟ್ ಆಗಿದ್ದಾರೆ. ಚೈತ್ರಾ, ಧರ್ಮ, ಗೌತಮಿ, ಹನುಮಂತ, ಮಂಜು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಈ ವಾರ ನಾಮಿನೇಟ್ ಆಗಿದ್ದರು.
ನಾಮಿನೇಟ್ ಆದ 7 ಜನರಲ್ಲಿ ಮಂಜು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕೊನೆಯಲ್ಲಿ ಚೈತ್ರಾ ಮತ್ತು ಧರ್ಮ ಉಳಿದಿದ್ದರು. ಧರ್ಮ ಎಲಿಮಿನೇಟ್ ಆದರು. ಮನೆಯ ಅಷ್ಟು ಮಂದಿ ಧರ್ಮ ಅವರನ್ನು ಕಳುಹಿಸುವಾಗ ಬಿಕ್ಕಿ ಬಿಕ್ಕಿ ಅತ್ತರು. ಧರ್ಮ ಕೂಡ ಅತ್ತುಕೊಂಡೇ ಮನೆಯಿಂದ ಹೊರಬಂದರು.
ಮನೆಯಿಂದ ಹೊರಬಂದ ಬಳಿಕ ಸುದೀಪ್ ಏನಿಲ್ಲಿ? ಕೋಪದಿಂದ ಕೇಳುತ್ತಿದ್ದೇನೆ ಎಂದು ಪ್ರಶ್ನಿಸಿದರು. ಎಲ್ಲಿ ಹೇಗಿರಬೇಕು ಹಾಗೆ ಇರಲೇಬೇಕು. ಇಲ್ಲಾಂದ್ರೆ ವರ್ಕ್ ಆಗಲ್ಲ ನನ್ನ ಅನುಭವದ ಮಾತು ಹೇಳುತ್ತಿದ್ದೇನೆ ಎಂದು ಕಿಚ್ಚ ಕಿವಿಮಾತು ಕೂಡ ಹೇಳಿದರು.
ಅವರ ತಂದೆ ಹಿರಿಯ ನಟ ಕೀರ್ತಿರಾಜ್, ನನ್ನ ಮಗ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಳ್ಳದೆ ಆಡಿದ್ದಾನೆ. ಕಪ್ ಗೆಲ್ಲದಿರಬಹುದು. ದೇಶದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಇದೆ ಎಂದರು.
ಕಳೆದ ವಾರ ಧರ್ಮ ಅವರ ಆತ್ಮೀಯ ಗೆಳತಿ ಅನುಷಾ ರೈ ಕೂಡ ಹೊರಬಂದಿದ್ದರು.
ತೆಲುಗು Bigg Bossನಿಂದ ಕನ್ನಡತಿ ಯಶ್ಮಿ ಗೌಡ ಪಡೆದ ಸಂಭಾವನೆ ಬರೋಬ್ಬರಿ 24 ಲಕ್ಷ ರೂ!
Relationship Tips ಈ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು, ಮುಜುಗರಪಟ್ಟುಕೊಂಡರೆ ಅಪಾಯ ನಿಶ್ಚಿತ
ಹಾಸ್ಯನಟ Actor Aliಗೆ ಅಧಿಕಾರಿಗಳ ನೋಟಿಸ್! ಫಾರ್ಮ್ಹೌಸ್ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ