newsics.com
ಬೆಂಗಳೂರು: ಉದ್ಯಮಿ, ವಕೀಲೆ ಎಸ್. ಜೀವಾ ಅವರನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಬೇಡಿಕೆ ಇಟ್ಟಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಜೀವಾ ಅವರ ಸಹೋದರಿ ಎಸ್. ಸಂಗೀತಾ ಬನಶಂಕರಿ ಠಾಣೆಗೆ ನೀಡಿರುವ ದೂರಿನಲ್ಲಿ ಈ ಮಾಹಿತಿ ಉಲ್ಲೇಖಿಸಿದ್ದಾರೆ.
ಡೆತ್ನೋಟ್ ಬರೆದಿಟ್ಟು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ, ವಕೀಲೆ ಜೀವಾ ಅವರ ಸಾವಿನ ಸಂಬಂಧ ಸಂಗೀತಾ ದೂರು ನೀಡಿದ್ದು, ಸಿಐಡಿ ಅಧಿಕಾರಿಗಳ ವಿರುದ್ಧ ಹಲವು ಆರೋಪ ಮಾಡಿದ್ದಾರೆ.
ಸಾಯುವ ಮುನ್ನ ಜೀವಾ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ ಹಾಗೂ ಸಂಗೀತಾ ನೀಡಿರುವ ದೂರು ಆಧರಿಸಿ ಸಿಐಡಿ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಅನ್ವಯ ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ವಂಚನೆ ಆರೋಪ ಪ್ರಕರಣದಲ್ಲಿ ಜೀವಾ ಅವರನ್ನು ವಿಡಿಯೋ ರೆಕಾರ್ಡಿಂಗ್ ಮೂಲಕ ನ.14ರಿಂದ 23ರವರೆಗೆ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿತ್ತು.
ನ.14ರಂದು ಜೀವಾ ಅವರು ಡಿವೈಎಸ್ಪಿ ಕನಕಲಕ್ಷ್ಮೀ ಅವರ ಎದುರು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ನನ್ನ ಅಕ್ಕನ ಒಳ ಉಡುಪುಗಳನ್ನೂ ‘ಸೈನೈಡ್ ತಂದಿದ್ಯಾ?’ ಎಂದು ಕೇಳಿದ್ದರು. ಅಲ್ಲದೆ, ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟು, ನೀವೆಲ್ಲ ಏಕೆ ಬದುಕಬೇಕು. ಅಕ್ಕ -ತಂಗಿ ಹೇಗೆ ಬದುಕುತ್ತೀರಾ? ಎಂದು ಪ್ರಶ್ನಿಸಿ ಮಾನಸಿಕವಾಗಿ ಕುಗ್ಗಿಸಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ.
ನನಗೆ ದಾಖಲೆ ನನಗೆ ಬೇಡ. ಬದಲಿಗೆ 25 ಲಕ್ಷ ರೂ. ಕೊಡು. ನೀನು ಹೋಗಿ ಸಾಯಿ ಎಂದು ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮಿ ಹಿಂಸೆ ಕೊಟ್ಟಿದ್ದರು. ಸಿಐಡಿ ತನಿಖಾಧಿಕಾರಿಯ ಮಾನಸಿಕ ಕಿರುಕುಳವೇ ಅಕ್ಕನ ಸಾವಿಗೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.
ಗಂಭೀರ ಆರೋಪಕ್ಕೆ ಒಳಗಾಗಿರುವ ಕನಕಲಕ್ಷ್ಮಿ ಅವರ ಹೆಸರು ಎರಡು ದಶಕದ ಹಿಂದೆ ನಡೆದಿದ್ದ ಲಾಟರಿ ಹಗರಣದಲ್ಲೂ ಕೇಳಿಬಂದಿತ್ತು.
ಭೋವಿ ಅಭಿವೃದ್ಧಿ ನಿಗಮದಲ್ಲಿ ಸಾಲ ಕೊಡಿಸುವುದಾಗಿ ಮಹಿಳೆಯರು ಸೇರಿದಂತೆ ಹಲವರಿಂದ ಹಣ ಪಡೆದು ವಂಚಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ 2023ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸರಸ್ವತಿ, ಲಕ್ಷ್ಮೀ ಹಾಗೂ ಎರಡು ಕಂಪನಿಗಳು ಸೇರಿ 9 ಆರೋಪಿಗಳನ್ನು ಹೆಸರಿಸಲಾಗಿತ್ತು.
IPL Auction ಐಪಿಎಲ್ ಹರಾಜು: ಯಾರು ಎಷ್ಟು ದುಡ್ಡಿಗೆ ಖರೀದಿಯಾದ್ರು? ಯಾರ್ಯಾರು ಸೇಲ್ ಆಗ್ಲಿಲ್ಲ? ಇಲ್ಲಿದೆ ಪಟ್ಟಿ
ಹಾಸ್ಯನಟ Actor Aliಗೆ ಅಧಿಕಾರಿಗಳ ನೋಟಿಸ್! ಫಾರ್ಮ್ಹೌಸ್ನಲ್ಲಿ ಅಕ್ರಮ ಕಟ್ಟಡ ನಿರ್ಮಾಣ
women search on google: ಮದುವೆಯಾದ ನಂತರ ಮಹಿಳೆಯರು ಗೂಗಲ್ನಲ್ಲಿ ಹೆಚ್ಚು ಹುಡುಕಾಡಿದ್ದೇನು?