newsics.com
ಸೋಮವಾರಪೇಟೆ(ಕೊಡಗು): ಸಾಲ ಬಾಧೆಗೆ ಒಳಗಾಗಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಗುತ್ತಿ ಗ್ರಾಮದಲ್ಲಿ ನಡೆದಿದೆ.
ಹೊಸಗುತ್ತಿಯ ಮಜೀದ್(45) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ರೈತ. ಬುಧವಾರ ಬೆಳಗಿನ ಜಾವ ತಮ್ಮ ಮನೆಯೊಳಗೆ ಕೋವಿಯಿಂದ ಗುಂಡು ಹಾರಿಸಿಕೊಂಡ ಮಜೀದ್ ಅವರನ್ನು ತಕ್ಷಣ ಅರಕಲಗೂಡು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ರೈತ ಮಜೀದ್ ಅವರು ವಿವಿಧ ಬ್ಯಾಂಕ್ ಹಾಗೂ ಇತರರಿಂದ ಕೈಸಾಲ ಪಡೆದುಕೊಂಡಿದ್ದರೆನ್ನಲಾಗಿದ್ದು, ಸಾಲ ತೀರಿಸಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಂಪ್ ಸರ್ಕಾರದಲ್ಲಿ ಎಲಾನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ಮಹತ್ವದ ಹುದ್ದೆ
ಉಪ ಚುನಾವಣೆ ಬಳಿಕ ಸಂಪುಟ ಪುನಾರಚನೆ: ಆರೇಳು ಸಚಿವರಿಗೆ ಕೊಕ್, ಆಡಳಿತ ಯಂತ್ರದಲ್ಲೂ ಭಾರೀ ಬದಲಾವಣೆ ಸಾಧ್ಯತೆ