newsics.com
ಬೆಂಗಳೂರು: ನೋಂದಣಿ ಅಕ್ರಮ ಹಾಗೂ ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿ ಪಾರದರ್ಶಕವಾಗಲಿದೆ.
ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ.
ಗ್ರಾಮ ಪಂಚಾಯತ್, ಬಿಬಿಎಂಪಿ, ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮವಾಗಿ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿರುವುದನ್ನು ತಪ್ಪಿಸಲು ಇ-ಖಾತಾ ಕಡ್ಡಾಯಗೊಳಿಸಿದೆ.
ಹೀಗಾಗಿ, ನಿಮ್ಮ ಆಸ್ತಿಗಳನ್ನು ಮಾರಲು ಅಥವಾ ಯಾವುದೇ ಆಸ್ತಿ ವಹಿವಾಟಿಗಾಗಿ ಇ-ಖಾತಾ ಹೊಂದುವುದು ಉತ್ತಮ. ಇ-ಖಾತಾ ಜಾರಿಯಿಂದ ವಂಚನೆಯುಕ್ತ, ಅಕ್ರಮ ನೋಂದಣಿಗಳು ಮತ್ತು ನಕಲಿ ಖಾತೆಗಳಿಗೆ ತಡೆಯಾಗಲಿದೆ. ಒಂದೇ ಆಸ್ತಿಯ ಮೇಲಿನ ಬಹು-ನೋಂದಣಿಗಳಿಗೆ ಕಡಿವಾಣ ಬೀಳಲಿದೆ. ಅಲ್ಲದೆ, ಆಸ್ತಿ ವಿವಾದಗಳ ನಿಯಂತ್ರಣ, ತ್ವರಿತ ಹಾಗೂ ಪಾರದರ್ಶಕ ವಹಿವಾಟು ಸಾಧ್ಯವಾಗುವುದಲ್ಲದೆ, ಮುಗ್ಧ ಖರೀದಿದಾರರಿಗೆ ರಕ್ಷಣೆ ಸಿಗಲಿದೆ.
ಕಡಿಮೆಯಾಯ್ತು ರೈಲ್ವೆ ಟಿಕೆಟ್ ರಿಸರ್ವೇಷನ್ ಅವಧಿ, ಬದಲಾಗಲಿದೆ SBI, ICICI ಕ್ರೆಡಿಟ್ ಕಾರ್ಡ್ ನಿಯಮ
ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸರ: ಕೇಂದ್ರ ಸೇವೆಗೆ ಹೊರಟಿದೆ ಯುವ ಐಎಫ್ಎಸ್ ಅಧಿಕಾರಿ ದಂಪತಿ!
ವಕ್ಫ್ ನೋಟಿಸ್ ತಕ್ಷಣ ಹಿಂಪಡೆಯಲು ಸಿಎಂ ಸೂಚನೆ, ಪಹಣಿ ತಿದ್ದುಪಡಿ ರದ್ದತಿಗೂ ಆದೇಶ
3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ; ಕೊಲೆ ಮಾಡಿ ಹೊಲದಲ್ಲಿ ಹೂತುಹಾಕಿದ ಸಂಬಂಧಿ