newsics.com
ದೀಪಾವಳಿ ಹಬ್ಬದಂದು ಈ ಹಳ್ಳಿಯಲ್ಲಿ ಕನ್ಯೆಯರು ಕಣ್ಣೀರು ಸುರಿಸುತ್ತಾರಂತೆ. ಅಷ್ಟೇಅಲ್ಲದೇ, ಮದುವೆಯಾಗದ ಮಹಿಳೆಯರು, ತಮ್ಮ ಸಾಂಸ್ಕೃತಿಕ ಸೊಗಸನ್ನು ಆಚರಿಸಿ, ಅಪ್ಪಿ ಕೊಳ್ಳುತ್ತ ಕಣ್ಣೀರು ಸುರಿಸುತ್ತಾರೆ.
ಗದಗ ಜಿಲ್ಲೆಯ ಗಜೇಂದ್ರಗಡದ ಸಾರ ಎಂಬ ಲಂಬಾಣಿ ಸಮುದಾಯದಲ್ಲಿ ಕನ್ಯೆಯರು ಹತ್ತಿರದ ಬೆಟ್ಟಕ್ಕೆ ಹೋಗಿ, ಲಂಬಾಣಿ ಸಾಹಿತ್ಯದ ಹಾಡುಗಳೊಂದಿಗೆ ಹೂವುಗಳನ್ನು ಸಂಗ್ರಹಿಸುತ್ತಾರೆ.
ಹಬ್ಬದ ದಿನ ತಾಂಡಾದ ಸೇವಾಲಾಲ್ ದೇವಸ್ಥಾನದ ಮುಂದೆ ರೋಮಾಂಚಕ ನೃತ್ಯಗಳು ಮತ್ತು ಆಚರಣೆಗಳಲ್ಲಿ ಉತ್ಸವಗಳು ನಡೆಯುತ್ತವೆ. ಮದುವೆಯಾದ ಮಹಿಳೆಯರು ಬೆಳಕಿನ ಹಬ್ಬದಂದು ಈ ಆಚರಣೆಯಲ್ಲಿ ಭಾಗವಹಿಸುವಂತಿಲ್ಲ. ಮುಂದಿನ ವರ್ಷ ಮದುವೆಯಾದರೆ ಈ ಹಬ್ಬ ಸಿಗಲ್ಲ ಎನ್ನುವ ಕಾರಣಕ್ಕೆ ಕನ್ಯಾಮಣಿಗಳು ತಬ್ಬಿಕೊಂಡು ಅಳುತ್ತಾರೆ ಎನ್ನಲಾಗಿದೆ.
ಇಂದಿನಿಂದ ಮನೆ-ಮನಗಳಲ್ಲಿ ದೀಪಾವಳಿ ಸಡಗರ: ಕಿರು ದೀಪಾವಳಿ, ಲಕ್ಷ್ಮೀ ಪೂಜೆ ಹೀಗೆ ಆಚರಿಸಿ