newsics.com
ಬೆಂಗಳೂರು: ಮುಡಾ ಹಗರಣ ಜಾರಿನಿರ್ದೇಶನಾಲಯ ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಮಂಗಳವಾರ ಏಕಾಏಕಿ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ರನ್ನು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ವರಿಗೆ 14 ನಿವೇಶನಗಳನ್ನು ಮಂಜೂರು ಮಾಡಿರವುದು ನಟೇಶ್ ಅವಧಿಯಲ್ಲೇ ಎಂಬುದನ್ನು ಇಡಿ ಖಚಿತಪಡಿಸಿಕೊಂಡ ಬಳಿಕ ನಟೇಶ್ರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಬೆಳವಣಿಗೆ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮಹತ್ವದ ಹೆಜ್ಜೆಯಾಗಿದೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ನಟೇಶ್ ಮನೆ ಮೇಲೆ ಇಡಿ ಅಕಾರಿಗಳು ದಾಳಿ ಮಾಡಿದ್ದರು. ಬರೊಬ್ಬರಿ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಎಲ್ಲಾ ದಾಖಲೆಗಳನ್ನು ಮಂಗಳವಾರದವರೆಗೂ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದಭರ್ದಲ್ಲಿ ಅಕ್ರಮ ನಡೆದ ಸುಳಿವು ಹಾಗೂ ಕೆಲ ಗೊಂದಲಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಂಜೆ ವೇಳೆ ನೇರವಾಗಿ ಮತ್ತೊಮ್ಮೆ ಮಲ್ಲೇಶ್ವರದಲ್ಲಿದ್ದ ನಟೇಶ್ ಮನೆಗೆ ಲಗ್ಗೆಯಿಟ್ಟ ಇಡಿ ಅಕಾರಿಗಳು, ಅವರನ್ನು ವಶಕ್ಕೆ ಪಡೆದು ಶಾಂತಿನಗರದ ಇಡಿ ಕಚೇರಿಗೆ ಕರೆದೊಯ್ದಿದ್ದಾರೆ.