Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ‌ ಬದಲಾವಣೆ ನಿರೀಕ್ಷೆ
ಕರ್ನಾಟಕಆರೋಗ್ಯದೇಶಪ್ರಮುಖ

Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ‌ ಬದಲಾವಣೆ ನಿರೀಕ್ಷೆ

Share
2 Min Read
SHARE

newsics.com | ನ್ಯೂಸಿಕ್ಸ್

ನವದೆಹಲಿ: ಭಾರತದಲ್ಲಿ ಮಧುಮೇಹ (ಡಯಾಬಿಟಿಸ್) ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಬಲ್ಲ ಅತ್ಯಾಧುನಿಕ ಇನ್ಸುಲಿನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಡೆನ್ಮಾರ್ಕ್ ಮೂಲದ ಪ್ರಖ್ಯಾತ ಔಷಧ ತಯಾರಿಕಾ ಸಂಸ್ಥೆ ‘ನೊವೊ ನಾರ್ಡಿಸ್ಕ್’ (Novo Nordisk), ವಯಸ್ಕ ಟೈಪ್-1 ಮತ್ತು ಟೈಪ್-2 ಮಧುಮೇಹಿಗಳಿಗಾಗಿ ‘ಅವಿಕ್ಲಿ’ (Awiqli – insulin icodec) ಹೆಸರಿನ ವಿಶ್ವದ ಮೊದಲ ‘ವಾರಕ್ಕೊಮ್ಮೆ’ ತೆಗೆದುಕೊಳ್ಳುವ ಬೇಸಲ್ ಇನ್ಸುಲಿನ್ ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈ ಹೊಸ ಆವಿಷ್ಕಾರದಿಂದಾಗಿ ರೋಗಿಗಳು ವರ್ಷಕ್ಕೆ 365 ಬಾರಿ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಬದಲು, ಕೇವಲ 52 ಬಾರಿ ಪಡೆದರೆ ಸಾಕಾಗುತ್ತದೆ. ಇದು ಮಧುಮೇಹಿಗಳ ದೈನಂದಿನ ಚುಚ್ಚುಮದ್ದಿನ ಹೊರೆಯನ್ನು ಗಣನೀಯವಾಗಿ ತಗ್ಗಿಸಲಿದೆ.

ಇಂಜೆಕ್ಷನ್ ಭಯಕ್ಕೆ ಮುಕ್ತಿ!

ಮಧುಮೇಹ ಮತ್ತು ಬೊಜ್ಜು ನಿವಾರಣೆಯ ಸೂಪರ್-ಹಿಟ್ ಔಷಧ ‘ಸೆಮಾಗ್ಲುಟೈಡ್’ ತಯಾರಕ ಸಂಸ್ಥೆಯಾದ ನೊವೊ ನಾರ್ಡಿಸ್ಕ್, “ಭಾರತದಲ್ಲಿ ಇನ್ಸುಲಿನ್ ಚಿಕಿತ್ಸೆ ಆರಂಭಿಸಲು ರೋಗಿಗಳು ಹಿಂಜರಿಯಲು ಮುಖ್ಯ ಕಾರಣ ದೈನಂದಿನ ಇಂಜೆಕ್ಷನ್ ಮೇಲಿರುವ ಭಯ. ಇದರಿಂದಾಗಿ ಶೇ.7 ರಿಂದ 9 ರಷ್ಟು ವರ್ಷಗಳ ಕಾಲ ಚಿಕಿತ್ಸೆ ವಿಳಂಬವಾಗುತ್ತಿದೆ. ಹೊಸ ವಾರಕ್ಕೊಮ್ಮೆ ನೀಡುವ ಇನ್ಸುಲಿನ್ ಈ ಭಯವನ್ನು ಹೋಗಲಾಡಿಸಲಿದೆ ಎಂದು ತಿಳಿಸಿದೆ.

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಟೈಪ್-1 ಮತ್ತು ಮುಂದುವರಿದ ಹಂತದ ಟೈಪ್-2 ಮಧುಮೇಹಿಗಳಿಗೆ ಇನ್ಸುಲಿನ್ ಅತ್ಯಗತ್ಯ. ‘ಅವಿಕ್ಲಿ’ ಇನ್ಸುಲಿನ್ ಅನ್ನು ‘ಫ್ಲೆಕ್ಸ್ಟಚ್’ (FlexTouch) ಎಂಬ ವಿಶೇಷ ಪೆನ್ ಸಾಧನದ ಮೂಲಕ ವಾರಕ್ಕೊಮ್ಮೆ ಸುಲಭವಾಗಿ ತೆಗೆದುಕೊಳ್ಳಬಹುದು.

ಭಾರತದಲ್ಲಿ ಮಧುಮೇಹ ತೀವ್ರ

ಒಟ್ಟು ಮಧುಮೇಹಿಗಳು: ಭಾರತದಲ್ಲಿ ಸದ್ಯ ಸುಮಾರು 10.1 ಕೋಟಿ ಮಧುಮೇಹ ರೋಗಿಗಳಿದ್ದಾರೆ.

ಪ್ರೀ-ಡಯಾಬಿಟಿಸ್: ಸುಮಾರು 13.6 ಕೋಟಿ ಜನರು ಮಧುಮೇಹದ ಮುನ್ನಾದಿನಗಳಲ್ಲಿದ್ದಾರೆ (Prediabetes).

ಟೈಪ್-1 ಮಧುಮೇಹ: ದೇಶದಲ್ಲಿ 9 ಲಕ್ಷಕ್ಕೂ ಹೆಚ್ಚು ಜನರು ಟೈಪ್-1 ಆಟೋಇಮ್ಯೂನ್ ಮಧುಮೇಹದಿಂದ ಬಳಲುತ್ತಿದ್ದು, ಇವರಿಗೆ ಇನ್ಸುಲಿನ್ ಕಡ್ಡಾಯವಾಗಿದೆ.

ಟೈಪ್-2 ಮಧುಮೇಹ: ಶೇ. 10 ರಷ್ಟು ಟೈಪ್-2 ಮಧುಮೇಹಿಗಳಿಗೂ ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿದೆ.

ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ
ಕ್ಲಿನಿಕಲ್ ಪ್ರಯೋಗಗಳ (ONWARDS-1 ಪ್ರೋಗ್ರಾಂ) ಪ್ರಕಾರ, ದಿನನಿತ್ಯ ತೆಗೆದುಕೊಳ್ಳುವ ‘ಇನ್ಸುಲಿನ್ ಗ್ಲಾರ್ಗಿನ್ U100’ ಗೆ ಹೋಲಿಸಿದರೆ ‘ಅವಿಕ್ಲಿ’ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು (HbA1c) ನಿಯಂತ್ರಿಸುವಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಜೊತೆಗೆ ಹೈಪೋಗ್ಲೈಸೀಮಿಯಾ (ರಕ್ತದಲ್ಲಿ ಸಕ್ಕರೆ ಅಂಶ ದಿಢೀರ್ ಕುಸಿಯುವುದು) ಅಪಾಯವಿಲ್ಲದೆ ರೋಗಿಗಳ ಸಕ್ಕರೆ ಮಟ್ಟವನ್ನು ಶೇ. 7 ಕ್ಕಿಂತ ಕಡಿಮೆ ಕಾಯ್ದುಕೊಳ್ಳಲು ನೆರವಾಗಿದೆ.

ಐಸಿಎಂಆರ್ (ICMR) ಮತ್ತು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಜಂಟಿಯಾಗಿ ನಡೆಸಿದ್ದ ರಾಷ್ಟ್ರಮಟ್ಟದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಮಧುಮೇಹ ಇರುವ ಮೂವರಲ್ಲಿ ಕೇವಲ ಒಬ್ಬರು ಮಾತ್ರ ಸರಿಯಾದ ನಿಯಂತ್ರಣ ಹೊಂದಿದ್ದಾರೆ ಎಂಬ ಆತಂಕಕಾರಿ ವಿಷಯ ಹೊರಬಂದಿತ್ತು. ಸದ್ಯ ನೊವೊ ನಾರ್ಡಿಸ್ಕ್ ಸಂಸ್ಥೆಯು ಭಾರತದಲ್ಲಿ ಈ ಹೊಸ ಇನ್ಸುಲಿನ್ ವಿತರಣೆಗಾಗಿ ‘ಅಬಾಟ್’ (Abbott) ಸಂಸ್ಥೆಯೊಂದಿಗೆ ಕೈಜೋಡಿಸಿದೆ.

LPG flood ಭಾರೀ ಮಳೆಗೆ ನದಿಯಲ್ಲಿ ಕೊಚ್ಚಿಹೋದ 3 ಸಾವಿರಕ್ಕೂ ಹೆಚ್ಚು LPG ಸಿಲಿಂಡರ್‌ಗಳು: ವೈರಲ್ ವಿಡಿಯೋ ನೋಡಿ

BSNL ಕ್ರಾಂತಿಕಾರಕ ಮೊಬೈಲ್ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್! ಇದು ಅಂತಿಂಥ ಪೋನ್ ಅಲ್ಲ, ಬೆಲೆಯೂ ಕಡಿಮೆಯಿಲ್ಲ

Fake Teachers ನಕಲಿ ಅಂಕಪಟ್ಟಿ ಜಾಲಕ್ಕೆ ಸರ್ಕಾರ ಬ್ರೇಕ್: 3,035 ಶಿಕ್ಷಕರು ಉದ್ಯೋಗದಿಂದ ವಜಾ

 

TAGGED:expected to revolutionize diabetes treatment in the countryLaunch of advanced weekly insulin
Share This Article
Facebook Twitter Copy Link Print
Previous Article BSNL ಕ್ರಾಂತಿಕಾರಕ ಮೊಬೈಲ್ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್! ಇದು ಅಂತಿಂಥ ಪೋನ್ ಅಲ್ಲ, ಬೆಲೆಯೂ ಕಡಿಮೆಯಿಲ್ಲ
Next Article Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ

Popular Posts

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

1 Min Read

E85 fuel ಶೀಘ್ರದಲ್ಲೇ ಫ್ಲೆಕ್ಸ್-ಫ್ಯುಯೆಲ್ ಕಾರುಗಳಿಗಾಗಿ ಸಿಗಲಿದೆ ಇ85 ಎಥೆನಾಲ್ ಇಂಧನ

3 Min Read

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

1 Min Read

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

2 Min Read

You Might Also Like

ಕರ್ನಾಟಕಪ್ರಮುಖ

Government Bus ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಧೂಮಪಾನ ಮಾಡಿದರೆ, ಗುಟ್ಕಾ ಜಗಿದರೆ, ಉಗುಳಿದರೆ ಭಾರೀ ದಂಡ!

1 Min Read
ಕರ್ನಾಟಕದೇಶಪ್ರಮುಖ

Medical seat fraud ಮೆಡಿಕಲ್ ಸೀಟ್ ವಂಚನೆ: ಮಾಜಿ ಸಚಿವ ಆರ್‌.ಎಲ್.ಜಾಲಪ್ಪ ಸೊಸೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ

1 Min Read
ದೇಶಪ್ರಮುಖ

TCS ಲೈಂಗಿಕ ಕಿರುಕುಳ ಕೇಸ್: ಗರ್ಭಿಣಿ ನಿಧಾ ಖಾನ್‌ಗೆ ಜಾಮೀನು

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?