newsics.com
ಬೆಂಗಳೂರು: ಜೈಲಿನಲ್ಲಿ ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋ ವೈರಲ್ ಆದ ಬೆನ್ನಲ್ಲೇ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ದರ್ಶನ್ ಸೇರಿ ಇತರ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದರು. ಈ ಮನವಿಯನ್ನು ವಿಚಾರಣೆ ಮಾಡಿದ ಕೋರ್ಟ್ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿ ಆದೇಶ ಹೊರಡಿಸಿದೆ.
- ದರ್ಶನ್- ಬಳ್ಳಾರಿ ಜೈಲು
- ಪವನ್- ರಾಘವೇಂದ್ರ, ನಂದೀಶ್- ಮೈಸೂರು ಜೈಲು
- ಜಗದೀಶ್- ಶಿವಮೊಗ್ಗ,
- ಧನರಾಜ್- ಧಾರವಾಡ ಜೈಲು
- ವಿನಯ್- ವಿಜಯಪುರ ಜೈಲು
- ನಾಗರಾಜ್- ಕಲಬುರಗಿ
- ಲಕ್ಷ್ಮಣ- ಶಿವಮೊಗ್ಗ
- ಪ್ರದೂಶ್- ಬೆಳಗಾವಿ
- ಪವಿತ್ರಗೌಡ- ಪರಪ್ಪನ ಅಗ್ರಹಾರ
- ಅನುಕುಮಾರ್- ಪರಪ್ಪನ ಅಗ್ರಹಾರ
- ದೀಪಕ್- ಪರಪ್ಪನ ಅಗ್ರಹಾರ
- ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿದ್ದಾರೆ.