newsics.com
ನ್ಯೂಸಿಕ್ಸ್. ಕಾಮ್
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಹಿಂದೂ ಧರ್ಮದಲ್ಲಿ ಕೃಷ್ಣ ಜನ್ಮಾಷ್ಟಮಿ ಬಹಳ ಮಹತ್ವದ್ದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ರೋಹಿಣಿ ನಕ್ಷತ್ರದಲ್ಲಿ ಜನಿಸಿದ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 26 ರಂದು ಕೃಷ್ಣಾಷ್ಟಮಿ ಆಚರಿಸಲಾಗುತ್ತಿದೆ.
ಈ ದಿನ, ಶ್ರೀಕೃಷ್ಣನ ಮಗುವಿನ ರೂಪವನ್ನು ಅಂದರೆ ಲಡ್ಡು ಗೋಪಾಲನನ್ನು ಪೂಜಿಸಲಾಗುತ್ತದೆ. ಈ ದಿನದಂದು ಉಪವಾಸವನ್ನೂ ಮಾಡಲಾಗುತ್ತದೆ.
ಹಾಗೆಯೇ ಶ್ರೀಕೃಷ್ಣನ ಪೂಜೆಯಲ್ಲಿ ಸೌತೆಕಾಯಿಗೆ ವಿಶೇಷ ಮಹತ್ವವಿದೆ. ಹಲವೆಡೆ ಸೌತೆಕಾಯಿಯನ್ನು ಪೂಜೆ ಹಾಗೂ ನೈವೇದ್ಯಕ್ಕಿಡುತ್ತಾರೆ. ಸೌತೆಕಾಯಿಯನ್ನು ಕತ್ತರಿಸುವುದು ಕೃಷ್ಣನ ಹೊಕ್ಕುಳಬಳ್ಳಿಯನ್ನು ಕತ್ತರಿಸುವುದು ಎಂದೇ ಪರಿಗಣಿಸಲಾಗುತ್ತದೆ
ಭಾರತದ ಅನೇಕ ಸ್ಥಳಗಳಲ್ಲಿ ಶ್ರೀಕೃಷ್ಣ ಸೌತೆಕಾಯಿಯಿಂದ ಹುಟ್ಟಿದನೆಂದು ನಂಬುತ್ತಾರೆ.
ಪೂಜೆಯ ಬಳಿಕ ಈ ಸೌತೆಕಾಯಿಯನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುತ್ತದೆ. ಗರ್ಭಿಣಿಯರು ಈ ಕತ್ತರಿಸಿದ ಸೌತೆಕಾಯಿಯನ್ನು ಪ್ರಸಾದವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಮಕ್ಕಳಾಗಲು ಜನ್ಮಾಷ್ಟಮಿಯಂದು ಸೌತೆಕಾಯಿಯನ್ನು ಮಹಿಳೆಯರು ಪ್ರಸಾದವಾಗಿ ಸೇವಿಸಬೇಕು ಎಂಬ ನಂಬಿಕೆಯೂ ಇದೆ.
ಹಲವೆಡೆ ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ಗರ್ಭಿಣಿಯರಿಗೆ ಸೌತೆಕಾಯಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ವೈಜ್ಞಾನಿಕವಾಗಿ, ಸೌತೆಕಾಯಿ ಗರ್ಭಿಣಿಯರಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ, ಎ, ಕೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಸತುವು ಸಮೃದ್ಧವಾಗಿದೆ. ಗರ್ಭಿಣಿಯರಿಗೆ ಇವು ಅತ್ಯಗತ್ಯ.
ಅಲ್ಲದೆ ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಅರ್ಪಿಸುವ ಎಲ್ಲಾ ನೈವೇದ್ಯಗಳು ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಖನ್ ಮಿಶ್ರಿ, ಖೀರ್, ಕೊತ್ತಂಬರಿ ಸೊಪ್ಪು ಪಂಜಿರಿ, ಪಂಚಾಮೃತ ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು.