newsics.com/ನ್ಯೂಸಿಕ್ಸ್
ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸರ್ಜಾಪುರ ಮುಖ್ಯರಸ್ತೆಯ ಅಪೊಲೊ ಬೆಲ್ಲೆನಸ್ ಚಾಂಪಿಯನ್ ಆಸ್ಪತ್ರೆಯಲ್ಲಿ ನಡೆದಿದೆ. ಮೇ 21 ರಂದು ಈ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆ ಶೌಚಾಲಯ ಬಳಸುತ್ತಿದ್ದಾಗ, ಅಪರಿಚಿತ ವ್ಯಕ್ತಿ ಆಕೆಯ ಫೋಟೋ ತೆಗೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಶೌಚಾಲಯದೊಳಗೆ ಇರುವಾಗಲೇ ಯಾರೋ ಫೋಟೋ ಕ್ಲಿಕ್ ಮಾಡುತ್ತಿರುವುದನ್ನು ಆಕೆ ಗಮನಿಸಿ ತಕ್ಷಣವೇ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯವರು ಪರಿಶೀಲನೆ ನಡೆಸಿದಾಗ, ಮಹಿಳೆಯರ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾದವು ಎಂದು ತಿಳಿದುಬಂದಿದೆ. ಅಂದರೆ, ಇದು ಒಮ್ಮೆಯ ತಪ್ಪಲ್ಲ, ಹಲವು ಬಾರಿ ಇಂತಹ ಕೃತ್ಯ ನಡೆದಿದೆ ಎಂಬ ಅನುಮಾನ ಮೂಡಿಸಿದೆ. ಈ ಘಟನೆ ಗರ್ಭಿಣಿ ಮಹಿಳೆಯ ಮೇಲೆ ಭಾರೀ ಮಾನಸಿಕ ಒತ್ತಡವನ್ನು ಉಂಟುಮಾಡಿದೆ. ಸುರಕ್ಷತೆಗಾಗಿ, ಚಿಕಿತ್ಸೆಗಾಗಿ ಬಂದಿದ್ದ ಮಹಿಳೆ ಇಂತಹ ಘಟನೆ ಎದುರಿಸಿದ್ದು, ದುಃಖಕರ ವಿಷಯವಾಗಿದೆ.
ಆಸ್ಪತ್ರೆ ಕೃಷ್ಣ ಪರಾಗಿ ಎಂಬಾತನಿಂದ ಫೋಟೋ ತೆಗೆದ ಆರೋಪ
ಪರಿಶೀಲನೆಯ ವೇಳೆ ಫೋಟೋ ತೆಗೆದ ವ್ಯಕ್ತಿ ಕೃಷ್ಣ ಪರಾಗಿ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಮಹಿಳೆ ನೇರವಾಗಿ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೃಷ್ಣ ಪರಾಗಿ ವಿರುದ್ಧವೂ, ಅಪೊಲೊ ಬೆಲ್ಲೆನಸ್ ಚಾಂಪಿಯನ್ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧವೂ ದೂರು ದಾಖಲಿಸಲಾಗಿದೆ. ಮಹಿಳೆಯ ಗೌಪ್ಯತೆಗೆ ಧಕ್ಕೆ ತಂದಿರುವ ಈ ಕೃತ್ಯವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ!
ಐಪಿಎಸ್ ಅಧಿಕಾರಿ ಯತೀಶ್ ಈ ಬಗ್ಗೆ ಮಾಹಿತಿ ನೀಡಿದ್ದು, 36 ವರ್ಷದ ಮಹಿಳೆ ಸರ್ಜಾಪುರ ರಸ್ತೆಯಲ್ಲಿರುವ ಅಪೋಲೋ / ಬೆಲೆನಸ್ ಚಾಂಪಿಯನ್ಸ್ ಆಸ್ಪತ್ರೆಗೆ ಮೇ 21ರಂದು ಮಧ್ಯಾಹ್ನ 12:30ರಿಂದ ಮಧ್ಯಾಹ್ನ 4:15ರ ನಡುವೆ ಭೇಟಿ ನೀಡಿದ್ದರು. ಅವರು ಟಾಯ್ಲೆಟ್ ಬಳಸುತ್ತಿರುವಾಗ ಒಬ್ಬ ಪುರುಷ ಸಿಬ್ಬಂದಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದರು. ಅವರು ತಮ್ಮ ಮೊಬೈಲ್ ಫೋನ್ ಬಳಸಿ ಫೋಟೋ ಅಥವಾ ವಿಡಿಯೋ ತೆಗೆಯುತ್ತಿರುವಂತೆ ಕಂಡುಬಂದಿತು. ಇದರಿಂದ ಆಕೆಗೆ ಗಂಭೀರ ಅನುಮಾನ ಉಂಟಾಗಿದೆ. ಟಾಯ್ಲೆಟ್ ಒಳಗಿದ್ದಾಗ ಆತ ತನ್ನ ಫೋಟೋ ಅಥವಾ ವಿಡಿಯೋ ತೆಗೆದಿರಬಹುದು ಎಂದು ಶಂಕಿಸಿದ್ದು, ತಕ್ಷಣವೇ ಆತನನ್ನು ಪ್ರಶ್ನಿಸಿದಾಗ ಆತ ಸ್ಥಳದಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ನಂತರ ಆ ಮಹಿಳೆ ಆಸ್ಪತ್ರೆಯ ಆಡಳಿತ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ ಕೃಷ್ಣ ರಾಮ್ ಪಾಂಗಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ತನಿಖೆಯ ವೇಳೆ ಆರೋಪಿಯ ಬಳಿ ಆ ರೀತಿಯ ಯಾವುದೇ ಫೋಟೋ ಅಥವಾ ವಿಡಿಯೋ ಕಂಡುಬಂದಿಲ್ಲ ಎನ್ನಲಾಗಿದೆ. ಆರೋಪಿ ಮತ್ತು ಆಸ್ಪತ್ರೆ ಆಡಳಿತಕ್ಕೆ ನೋಟಿಸ್ ನೀಡಲಾಗಿದೆ. ಆರೋಪಿಯ ಮೊಬೈಲ್ ಫೋನ್ ಸೀಜ್ ಮಾಡಲಾಗಿದ್ದು, ಮುಂದಿನ ತನಿಖೆಗಾಗಿ ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.
ದರ್ಶನ್ ಕೇಸ್ನಲ್ಲಿ ಮಹತ್ವದ ಬೆಳವಣಿಗೆ – ಏನದು?;ವಾರಕ್ಕೆ ನಾಲ್ಕು ದಿನ ವಿಚಾರಣೆಗೆ ಕೋರ್ಟ್ ಪ್ಲಾನ್?