newsics.com/ನ್ಯೂಸಿಕ್ಸ್
ಪಶ್ಚಿಮ ಬಂಗಾಳದಲ್ಲಿ ದೀದೀ ಸರ್ಕಾರದ ಪತನ ಆಗಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಬದಲಾವಣೆಗಳನ್ನು ರಾಜ್ಯ ಕಾಣುತ್ತಿದೆ. ಇದಾಗಲೇ ಅನಧಿಕೃತ, ಅಕ್ರಮ ಸ್ಥಳಗಳ ಮೇಲೆ ಬುಲ್ಡೋಜರ್ ಪ್ರಹಾರ ಮಾಡಿದೆ.
ಮಮತಾ ಅವರ ಸುದೀರ್ಘ ಆಡಳಿತಾವಧಿಯಲ್ಲಿ ಜಾರಿಯಲ್ಲಿದ್ದ ತುಷ್ಟೀಕರಣ ನೀತಿ ಮತ್ತು ಅಕ್ರಮ ನುಸುಳುಕೋರರ ಪರ ನಿರ್ಧಾರಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವ ಸುವೇಂದು ಸರ್ಕಾರ, ರಾಜ್ಯದಲ್ಲಿ ಹಿಂದೂ ಮತಗಳ ಬಲವಾದ ಧ್ರುವೀಕರಣಕ್ಕೆ ಮುನ್ನುಡಿ ಬರೆದಿದೆ.
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ನಿಷೇಧ, ರಸ್ತೆಗಳಲ್ಲಿ ಸಾರ್ವಜನಿಕ ನಮಾಜ್ ತಡೆ ಹಾಗೂ ಬಕ್ರೀದ್ ವೇಳೆ ಸಾರ್ವಜನಿಕವಾಗಿ ಗೋಹತ್ಯೆ ಮಾಡುವುದರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ಸುವೇಂದು ಅಧಿಕಾರಿ ಇಡೀ ದೇಶದ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಅವರು ಅಧಿಕಾರಕ್ಕೆ ಬಂದ ತಕ್ಷಣ ಅಪರಾಧಿಗಳ ವಿರುದ್ಧ ನಾಲ್ಕು ಹಂತದ ಕಠಿಣ ಸೂತ್ರಗಳನ್ನು ಜಾರಿಗೆ ತಂದಿದ್ದರು. ಪ್ರಭಾವಿ ಅಪರಾಧಿಗಳಿಗೆ ಯಾವುದೇ ರಿಯಾಯಿತಿ ನೀಡದಿರುವುದು, ಬುಲ್ಡೋಜರ್ ಪ್ರಯೋಗ, ಮತ್ತು ಎನ್ಕೌಂಟರ್ಗಳ ವೇಗವನ್ನು ಹೆಚ್ಚಿಸುವ ಮೂಲಕ ಯುಪಿಯಲ್ಲಿ ಅಪರಾಧ ಮುಕ್ತ ಆಡಳಿತ ತಂದಿದ್ದರು. ಈಗ ಬಂಗಾಳದಲ್ಲೂ ಅದೇ ಮಾದರಿಯ ಎನ್ಕೌಂಟರ್ ಮತ್ತು ಬುಲ್ಡೋಜರ್ ಸಂಸ್ಕೃತಿ ಆರಂಭವಾಗಿದೆ. ಜೈಲಿನಿಂದ ಕೋರ್ಟ್ಗೆ ವಿಚಾರಣೆಗೆ ಹೋಗುವಾಗಲೂ ಅಪರಾಧಿಗಳು ಎನ್ಕೌಂಟರ್ ಭೀತಿಯಿಂದ ನಡುಗುವಂತಹ ವಾತಾವರಣವನ್ನು ಸುವೇಂದು ಸರ್ಕಾರ ಸೃಷ್ಟಿಸಿದೆ.
ಸ್ವಾತಂತ್ರ್ಯದ ನಂತರ ರಾಜಕೀಯ ಲಾಭ ಹಾಗೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಂಗಾಳದ ಯಾವುದೇ ಸರ್ಕಾರಗಳು ಗೋಹತ್ಯೆ ತಡೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರಲಿಲ್ಲ. ಮಮತಾ ಆಡಳಿತದಲ್ಲಿ ಸಾಂಸ್ಥಿಕ ರೂಪ ಪಡೆದುಕೊಂಡಿದ್ದ ಗೋ ಕಳ್ಳಸಾಗಣೆಯ ವಿರುದ್ಧ ಸುವೇಂದು ಈಗ ಹಳೆಯ ಕಾನೂನನ್ನು ಮಾರ್ಪಡಿಸಿ ಅತ್ಯಂತ ಕಠಿಣ ಶಿಕ್ಷೆಯ ನಿಯಮವನ್ನು ತಂದಿದ್ದಾರೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗೋಹತ್ಯೆ ಮಾಡುವುದನ್ನು ಸಂಪೂರ್ಣವಾಗಿ ಅಪರಾಧೀಕರಿಸಲಾಗಿದೆ. ಆರಂಭದಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದರೂ, ಕೋಲ್ಕತ್ತಾದ ಐತಿಹಾಸಿಕ ನಾಖೋಡಾ ಮಸೀದಿಯ ಇಮಾಮ್ ಅವರು ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿ, ಸಂಘರ್ಷದ ಹಾದಿ ಬೇಡ ಎಂದು ಕರೆ ನೀಡಿರುವುದು ಮುಸ್ಲಿಂ ಸಮುದಾಯದ ಮನಸ್ಥಿತಿಯಲ್ಲಿ ಬದಲಾವಣೆ ತಂದಿದೆ.
ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ಜನ ನಾಯಗನ್ ಬಿಡುಗಡೆ ದಿನಾಂಕ ಫಿಕ್ಸ್