newsics.com/ನ್ಯೂಸಿಕ್ಸ್
ಚೆನ್ನೈ: ತಮಿಳು ಕಿರುತೆರೆಯ ಪ್ರಮುಖ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಜೂಲಿ , ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡುವ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
Pakistan energy crisis ಯುದ್ಧದ ಎಫೆಕ್ಟ್ : ಪಾಕ್ನಲ್ಲಿ 8 ಗಂಟೆಗೆ ಅಂಗಡಿ ಬಂದ್
ತಮ್ಮ ಗರ್ಭಪಾತಕ್ಕೆ (ಗರ್ಭಸ್ರಾವ) ಮುಖ್ಯಮಂತ್ರಿ ವಿಜಯ್ ಅವರೇ ಪರೋಕ್ಷವಾಗಿ ಕಾರಣ ಎಂದು ಜೂಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ತಮಿಳುನಾಡಿನಲ್ಲಿ ನಡೆದಿದ್ದ ಪ್ರಸಿದ್ಧ ಜಲ್ಲಿಕಟ್ಟು ಚಳವಳಿಯ ಮೂಲಕ ಬೆಳಕಿಗೆ ಬಂದಿದ್ದ ನಟಿ ಜೂಲಿ, ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಹಂಚಿಕೊಳ್ಳುವಾಗ ತೀವ್ರ ಭಾವುಕರಾದರು.
ಟಿವಿಕೆ ಬೆಂಬಲಿಗರಿಂದ ನನ್ನನ್ನು ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಗರ್ಭಧಾರಣೆಯ ಸಮಯದಲ್ಲಿಯೂ ಇವೆಲ್ಲವುಗಳಿಂದ ಮಾನಸಿಕವಾಗಿ ನೊಂದದ್ದೇ ನನ್ನ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ನಟಿ ಹೇಳಿದ್ದಾರೆ.
ನನ್ನ ಪತಿಯ ವಿರುದ್ಧ ಪಿತೂರಿ ನಡೆಸಲಾಗಿದೆ. 15 ಲಕ್ಷ ರೂ. ಮೂತ್ರಪಿಂಡ ಹಗರಣದಲ್ಲಿ ಅವರನ್ನು ಸಿಲುಕಿಸಲಾಗಿದೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದರ ಬಗ್ಗೆ ನನಗೆ ನೋಟಿಸ್ ಕಳಿಸಿ, ಹಿಂಸೆ ನೀಡಲಾಗುತ್ತಿದೆ. ಇದರ ಹಿಂದೆ, ಟಿವಿಕೆ ಬೆಂಬಲಿಗ ಮತ್ತು ವಕೀಲರ ಕೈವಾಡವಿದೆ ಎಂದು ನಟಿ ಆರೋಪಿಸಿದ್ದಾರೆ.
ನಾವು ನಮ್ಮ ಮಗುವನ್ನು ಕಳೆದುಕೊಂಡೆವು. ನಾನು ಇತ್ತೀಚೆಗೆ ಮದುವೆಯಾಗಿದ್ದೆ, ಮತ್ತು ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡೆವು. ಆನ್ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯಿಂದಾಗಿ ನನ್ನ ಮಗು ಸಾವನ್ನಪ್ಪಿತು. ನಾನು ಇದನ್ನು ಸಹಾನುಭೂತಿಗಾಗಿ ಬಳಸಬಹುದು, ಆದರೆ ನನ್ನ ಉದ್ದೇಶವೆಂದರೆ ನನ್ನ ಗಂಡ ಮತ್ತು ನನ್ನ ಬಗ್ಗೆ ಮಾನನಷ್ಟ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಮಾಡಲಾಗುತ್ತಿದೆ ಎಂದು ನಟಿ ನೋವು ತೋಡಿಕೊಂಡಿದ್ದಾರೆ.
Pakistan energy crisis ಯುದ್ಧದ ಎಫೆಕ್ಟ್ : ಪಾಕ್ನಲ್ಲಿ 8 ಗಂಟೆಗೆ ಅಂಗಡಿ ಬಂದ್