newsics.com/ನ್ಯೂಸಿಕ್ಸ್
ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಮಾತಾಗಿದ್ದ ಕ್ಯೂಟ್ ಅಂಡ್ ಬೋಲ್ಡ್ ಬೆಡಗಿ ಕಾವ್ಯ ಶೈವ ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್. ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ‘ಬಜಾರಿ’ ಸ್ಟೈಲ್ ಮೂಲಕ ಫೈನಲ್ ಹಂತದವರೆಗೆ ತಲುಪಿ ಜನರ ಮನಗೆದ್ದಿದ್ದ ಕಾವ್ಯ, ಹೊರಗೆ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾವ್ಯ ಶೈವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾವ್ಯ ಅವರನ್ನ ನೋಡಲು ಅಲ್ಲಿ ಅಭಿಮಾನಿಗಳು ಜೇನುಗೂಡಿನಂತೆ ಮುತ್ತಿಕೊಂಡಿದ್ದರು. ಯಾವಾಗ ಕಾವ್ಯ ವೇದಿಕೆ ಮೇಲೆ ಬಂದರೋ, ಅಭಿಮಾನಿಗಳಿಗೆ ಸೆಲ್ಫಿ ತಗೊಳ್ಳೋಕೆ ಅದೇನು ಆತುರವೋ ಗೊತ್ತಿಲ್ಲ! ಸೀದಾ ಸ್ಟೇಜ್ ಹತ್ತೋಕೆ ಶುರು ಮಾಡಿದರು. ಆಗ ಶುರುವಾಯ್ತು ನೋಡಿ ಅಸಲಿ ಕಿರಿಕ್. ಆಯೋಜಕರು ಅಭಿಮಾನಿಗಳನ್ನು ತಡೆಯಲು ಹೋಗಿ ಅಲ್ಲಿ ಗದ್ದಲ ಸೃಷ್ಟಿಯಾಯಿತು.
ಕಾರ್ಯಕ್ರಮ ಸುಗಮವಾಗಿ ಸಾಗುತ್ತಿದೆ ಎನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಕಾವ್ಯ ಶೈವ ಅವರು ಮೈಕ್ ಹಿಡಿದು ಮಾತನಾಡಲು ಮುಂದಾದಾಗ, ಅಲ್ಲಿದ್ದ ಒಬ್ಬ ವ್ಯಕ್ತಿ (ಸ್ಥಳೀಯ ಸಿಬ್ಬಂದಿ ಅಥವಾ ಆಯೋಜಕ ಎನ್ನಲಾಗಿದೆ) ಏಕಾಏಕಿ ಕಾವ್ಯ ಅವರ ಬಳಿ ಬಂದು, ಅವರ ಕೈಯಲ್ಲಿದ್ದ ಮೈಕ್ ಅನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದೆ. ಈ ಘಟನೆಯಿಂದಾಗಿ ಕಾವ್ಯ ಅವರಿಗೆ ವೇದಿಕೆ ಮೇಲೆಯೇ ಮುಜುಗರವಾಗಿದೆ.
ಈ ಘಟನೆಯ ನಂತರ ಅಭಿಮಾನಿಗಳು ಮತ್ತು ಆಯೋಜಕರ ನಡುವೆ ವಾಗ್ವಾದ ತೀವ್ರಗೊಂಡಿದ್ದು, ಪರಿಸ್ಥಿತಿ ಗದ್ದಲದ ಹಂತಕ್ಕೆ ತಲುಪಿತು. ಈ ಸಮಯದಲ್ಲಿ ಕಾವ್ಯ ಅವರು ಬೇಸರದಿಂದ ಕಾರ್ಯಕ್ರಮವನ್ನು ಮಧ್ಯದಲ್ಲಿ ಬಿಟ್ಟು ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾವ್ಯ ಅಭಿಮಾನಿಗಳು ಆಯೋಜಕರ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭದ್ರತಾ ವ್ಯವಸ್ಥೆಯ ಕೊರತೆಯೇ ಎಲ್ಲಾ ಗದ್ದಲಕ್ಕೆ ಕಾರಣವೆಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಈ ಘಟನೆಯ ಬಗ್ಗೆ ಕಾವ್ಯ ಶೈವ ಅವರು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮುಂದಿನ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬ ಅಭಿಮಾನಿಗಳ ಮತ್ತು ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.
https://www.instagram.com/reel/DYuIvKXJ_sh/?igsh=cnFrcTQ2OWhiNTA0
ಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು