https://youtube.com/shorts/RcxcteKkGZ8?si=yxDv0iURLfg799X9
newsics.com
ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಕೃಷಿಹೊಂಡಗಳಿಗೆ ಬೇಲಿ ನಿರ್ಮಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಬಳಕೆಯಲ್ಲಿ ಇಲ್ಲದ ಮತ್ತು ಸುಸ್ಥಿತಿಯಲ್ಲಿ ಇಲ್ಲದ ಕೃಷಿ ಹೊಂಡಗಳನ್ನು ಮುಚ್ಚಿಸಬೇಕು. ಕೃಷಿ ಇಲಾಖೆ, ಪಂಚಾಯತ್ ಸಂಸ್ಥೆಗಳು ಪರಿಶೀಲನೆ ನಡೆಸುವಂತೆ ಮಾಡಿ ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಕೃಷಿ ಸಚಿವರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಕೃಷಿಹೊಂಡಗಳಲ್ಲಿ ಮಕ್ಕಳು ಮುಳುಗಿ ಮೃತಪಟ್ಟ ಘಟನೆಗಳು ನಡೆದಿವೆ. ಹೀಗಾಗಿ ಕೃಷಿಹೊಂಡಗಳಿಗೆ ಬೇಲಿ ಹಾಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ರೈತರ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಿಗಾಗಿ ನೀರಿನ ಸಂಗ್ರಹಕ್ಕೆ ಕೃಷಿಹೊಂಡಗಳನ್ನು ನಿರ್ಮಿಸಲಾಗುತ್ತದೆ. ಇತ್ತೀಚೆಗೆ ಅನೇಕ ದುರಂತಗಳು ನಡೆದಿವೆ.
ಕೃಷಿ ಹೊಂಡಗಳಿಗೆ ಬೆಲೆ ಮತ್ತು ಎಚ್ಚರಿಕೆ ಫಲಕ ಇಲ್ಲದಿರುವುದು ಸ್ಥಳೀಯ ಮಟ್ಟದಲ್ಲಿ ಮೇಲ್ವಿಚಾರಣೆ ಕೊರತೆ ಇದೆ. ಕೃಷಿ ಹೊಂಡಗಳ ಬಳಿ ಮಕ್ಕಳು, ಸಾರ್ವಜನಿಕರು, ಜಾನುವಾರುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.