newsics.com
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ Elets Mobility Excellence 2026 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ನಿಗಮದ ಎರಡು ಪ್ರಮುಖ ಯೋಜನೆಗಳಿಗೆ ಈ ಗೌರವ ದೊರೆತಿದೆ. Innovation in Citizen Engagement and Inclusive Mobility ವಿಭಾಗದಲ್ಲಿ ‘ಧ್ವನಿಸ್ಪಂದನ’ ಉಪಕ್ರಮಕ್ಕೆ ಹಾಗೂ Outstanding Public Transport Digitisation Initiative ವಿಭಾಗದಲ್ಲಿ ಯುಪಿಐ ಸೌಲಭ್ಯ ಹೊಂದಿದ AWATAR 4.0 ಯೋಜನೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಜಾರಿಗೊಂಡಿರುವ ‘ಧ್ವನಿಸ್ಪಂದನ’ – ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಯೋಜನೆ GIZ ಸಹಯೋಗದಲ್ಲಿ ಅನುಷ್ಠಾನಗೊಂಡಿದೆ. ಈ ಯೋಜನೆಯಿಂದ ದೃಷ್ಟಿ ವಿಕಲಚೇತನ ಪ್ರಯಾಣಿಕರ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸ್ವತಂತ್ರ ಸಂಚಾರಕ್ಕೆ ಉತ್ತೇಜನ ದೊರೆತಿದೆ.
AWATAR – Anywhere Anytime Advance Reservation ವ್ಯವಸ್ಥೆಯ ಮೂಲಕ ಪ್ರಯಾಣಿಕರು ವೆಬ್ ಹಾಗೂ ಮೊಬೈಲ್ ಮೂಲಕ ಯಾವುದೇ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ. ನೈಜ-ಸಮಯ ಆಸನ ಲಭ್ಯತೆ, ತಕ್ಷಣದ ದೃಢೀಕರಣ ಹಾಗೂ ಸುಗಮ ಪ್ರಯಾಣ ಯೋಜನೆ ಸೌಲಭ್ಯಗಳ ಜತೆ ಡೈನಾಮಿಕ್ ಯುಪಿಐ ಪಾವತಿ ವ್ಯವಸ್ಥೆ ಅಳವಡಿಸಿರುವುದರಿಂದ ವೇಗವಾದ, ಸುರಕ್ಷಿತ ಹಾಗೂ ನಗದುರಹಿತ ವ್ಯವಹಾರಗಳಿಗೆ ನೆರವಾಗಿದ್ದು, ಪಾರದರ್ಶಕತೆ ಹೆಚ್ಚಿಸಿದೆ.
ಈ ಪ್ರಶಸ್ತಿಯನ್ನು Elets Technomedia ವತಿಯಿಂದ ಮಂಗಳವಾರ Novotel Hyderabadನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕಿ (ವಾಣಿಜ್ಯ ಮತ್ತು ಜಾಹೀರಾತು) ಗಾಯತ್ರಿ ಕೆ.ಎಂ. ಅವರು ಪ್ರಶಸ್ತಿಯನ್ನು ತೆಲಂಗಾಣ ಸರ್ಕಾರದ ಸಾರಿಗೆ ಇಲಾಖೆ ಆಯುಕ್ತ ಕೆ.ಇಳಂಬರ್ತಿ, ಎಲೆಟ್ಸ್ ಟೆಕ್ನೋಮೀಡಿಯಾ ಸಂಸ್ಥೆ ಸಿಇಒ ಡಾ.ರವಿ ಗುಪ್ತಾ ಅವರಿಂದ ಸ್ವೀಕರಿಸಿದರು.
ಇನ್ಮುಂದೆ ಮಗು ದತ್ತು ಪಡೆದ ತಾಯಂದಿರಿಗೂ ‘ಹೆರಿಗೆ ರಜೆ ‘ ಕಡ್ಡಾಯ : ಸುಪ್ರೀಂ ತೀರ್ಪು