https://youtube.com/shorts/fD6pvkz7g8c?si=uKQ1N3BMJTvK6QIw
newsics.com
ಪತ್ನಿಯನ್ನು ಮುಗಿಸಲು ಪತಿಯೊರ್ವ ಮೂರು ಬಾರಿ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದ. ಮೂರು ಬಾರಿಯೂ ಪತ್ನಿ ಬಚಾವ್ ಆಗಿದ್ದಳು. ಆದರೆ ನಾಲ್ಕನೇ ಬಾರಿ ಪ್ಲಾನ್ ಬದಲಿಸಿ ಪತ್ನಿಯನ್ನು ಹತ್ಯೆ ಮಾಡಿರುವ. ಘಟನೆ ಮಹಾರಾಷ್ಟ್ರದ ಬುಲ್ಧಾನದಲ್ಲಿ ನಡೆದಿದೆ.
ಬುಲ್ಧಾನಾ ನಿವಾಸಿ ಪ್ರಕಾಶ್ ಗವಂಡೆಗೆ ತನ್ನ ಪತ್ನಿ ವೃಶಾಲಿ ಮೇಲೆ ಅನುಮಾನ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ವೃಶಾಲಿ ತನಗಿಂತ ಚೆನ್ನಾಗಿದ್ದಾಳೆ, ಹಲವರು ಆಕೆಯ ಜೊತೆ ಮಾತನಾಡುತ್ತಿದ್ದಾರೆ ಎಂಬದೆ ದೊಡ್ಡ ಸಮಸ್ಯೆಯಾಗಿತ್ತು. ಈ ಮಾತುಕತೆಯನ್ನೇ ಅಕ್ರಮ ಸಂಬಂಧ ಎಂದುಕೊಂಡ ಪ್ರಕಕಾಶ್ ಗವಂಡೆಗೆ ಸಂದೇಹಗಳು ಹೆಚ್ಚಾಗುತ್ತಲೇ ಹೋಗಿತ್ತು. ಪತ್ನಿ ಜೊತೆ ಕಿರಿಕ್, ಜಗಳ ಸೇರಿದಂತೆ ಹಲವು ಜಟಾಪಟಿಗಳು ನಡೆದಿದೆ. ಆದರೂ ತನಗೆ ಪತ್ನಿ ಮೇಲೆ ಪ್ರೀತಿ ಇರುವಂತೆ ನಡೆದುಕೊಂಡಿದ್ದಾನೆ.
ಮೂರು ಬಾರಿ ವಿಷ ಹಾಕಿ ಹತ್ಯೆಗೆ ಯತ್ನ
ಪತ್ನಿ ಮೇಲೆ ಅನುಮಾನ ಹೆಚ್ಚಾಗುತ್ತಿದ್ದಂತೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಪ್ರಕಾಶ್ ಗವಂಡೆ ಬಲವಾಗಿ ನಂಬಿದ್ದ. ಹೀಗಾಗಿ ಪತ್ನಿಯ ಊಟಕ್ಕೆ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದ. ಆದರೆ ಮೂರು ಬಾರಿ ಪತ್ನಿ ಬಚಾವ್ ಆಗಿದ್ದಳು. ಒಂದು ಬಾರಿ ಆಸ್ಪತ್ರೆ ದಾಖಲಾಗಿದ್ದಳು. ವಾಂತಿ ಮಾಡಿದ ಕಾರಣ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಸರಿಸುಮಾರು 6 ತಿಂಗಳಲ್ಲಿ ಮೂರು ಬಾರಿ ಈ ಹತ್ಯೆ ಯತ್ನ ನಡೆದಿತ್ತು. ಮೂರು ಬಾರಿ ಪ್ರಕಾಶ್ ವಿಫಲನಾಗಿದ್ದ. ಹೀಗಾಗಿ ತಾನು ಈ ಕೆಲಸಕ್ಕೆ ಯೋಗ್ಯನಲ್ಲ. ಯೋಗ್ಯರ ಕೈಯಲ್ಲಿ ಹತ್ಯೆ ಮಾಡಿಸಬೇಕು ಎಂದು ಪ್ಲಾನ್ ಮಾಡಿದ್ದ.
ಸುಪಾರಿ ಕಿಲ್ಲರ್ಗೆ 1 ಲಕ್ಷ ರೂಪಾಯಿ
ಸಣ್ಣ ಪುಡಿ ರೌಡಿಗಳ ಭೇಟಿಯಾಗಿ ಸುಪಾರಿ ಕಿಲ್ಲರ್ ನಂಬರ್ ಪಡೆದು ಕರೆ ಮಾಡಿದ್ದಾನೆ. ಬಳಿಕ 1 ಲಕ್ಷ ರೂಪಾಯಿಗೆ ಹತ್ಯೆ ಪ್ಲಾನ್ ರೆಡಿಯಾಗಿದೆ. ಇದರಂತೆ 1 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ನೀಡಿದ್ದಾನೆ. ಸುಪಾರಿ ಪಡೆದ ಕಿಲ್ಲರ್ ಗ್ಯಾಂಗ್ ವೃಶಾಲಿ ಶಾಲೆಗೆ ತೆರಳುತ್ತಿದ್ದ ವೇಳೆ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ಸೂಟರ್ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಕಾರಿನನ ಮೂಲಕ ವೇಗವಾಗಿ ಅಪಘಾತ ಮಾಡಿಸಿದ್ದಾರೆ. ಈ ಅಪಘಾತದಲ್ಲಿ ವೃಶಾಲಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಅಪಘಾತ ಪ್ರಕರಣ ದಾಖಲಿಸಿದ ಪೊಲೀಸರು ಅಪಘಾತದ ಮಾಡಿದ ವಾಹನ ಸೇರದಿದಂತೆ ಇತರ ಮಾಹಿತಿ ಕಲೆ ಹಾಕಿದ್ದರು. ಸಹಜ ಅಪಘಾತ ಪ್ರಕರಣ ಎಂದೇ ಪೊಲೀಸರು ಭಾವಿಸಿದ್ದರು. ಕೆಲ ಸಿಸಿಟಿವಿ ದೃಶ್ಯಗಳನ್ನು ಗಮನಿಸುವಾಗ ಈ ಕಾರು ಹಿಂಬಾಲಿಸಿರುವುದು ಪತ್ತೆಯಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಕಾರಿನ ಮಾಲೀಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. 1 ಲಕ್ಷ ರೂಪಾಯಿಗೆ ವೃಶಾಲಿ ಪತಿಯೇ ಕೊಲೆಗೆ ಸುಪಾರಿ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇತ್ತ ಗಂಡ ಪ್ರಕಾಶ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಒಂದೊಂದೆ ಘಟನೆಗಳು ಹೊರಬಂದಿದೆ.