https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ಮುಂಬೈ: ಇನ್ನು ಮುಂದೆ ಸಾಲ ವಸೂಲಾತಿ ಹೆಸರಿನಲ್ಲಿ ಬ್ಯಾಂಕುಗಳು ಅಥವಾ ಅವುಗಳ ಏಜೆಂಟ್ಗಳು ಗ್ರಾಹಕರನ್ನು ಬೆದರಿಸಲು ಸಾಧ್ಯವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI), ವಾಣಿಜ್ಯ ಬ್ಯಾಂಕುಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಿಗಾಗಿ ಸಾಲ ವಸೂಲಾತಿಗೆ ಸಂಬಂಧಿಸಿದ ಹೊಸ ಕರಡು ನಿಯಮಗಳನ್ನು ಹೊರಡಿಸಿದೆ.
ಹೊಸ ನಿಯಮಗಳ ಪ್ರಕಾರ, ಏಜೆಂಟ್ ಮಾಡುವ ಪ್ರತಿ ಕರೆಯೂ ರೆಕಾರ್ಡ್ ಆಗಬೇಕು ಮತ್ತು ಗ್ರಾಹಕರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ವಿಶೇಷವೆಂದರೆ, ಮನೆಯಲ್ಲಿ ಸಾವು, ಮದುವೆ ಅಥವಾ ಹಬ್ಬಗಳಂತಹ ಸಂದರ್ಭಗಳಲ್ಲಿ ವಸೂಲಾತಿಗಾಗಿ ಫೋನ್ ಮಾಡುವುದು ಅಥವಾ ಮನೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳು ಈ ವರ್ಷದ ಜುಲೈ 1 ರಿಂದ ಜಾರಿಗೆ ಬರಲಿವೆ.
RBI ನ ‘ಪ್ರಮುಖ ಬದಲಾವಣೆಗಳು
• ಕಾಲ್ ರೆಕಾರ್ಡಿಂಗ್: ಗ್ರಾಹಕರಿಗೆ ಮಾಡುವ ಪ್ರತಿಯೊಂದು ಕರೆಯನ್ನು ರೆಕಾರ್ಡ್ ಮಾಡಬೇಕು. ವಿವಾದ ಉಂಟಾದಾಗ ಇದು ಸಾಕ್ಷಿಯಾಗಿ ಬಳಕೆಯಾಗುತ್ತದೆ.
• ಸಭ್ಯ ವರ್ತನೆ: ಏಜೆಂಟ್ಗಳು ಅವಾಚ್ಯ ಶಬ್ದಗಳ ಬಳಕೆ ಅಥವಾ ಅಸಭ್ಯವಾಗಿ ವರ್ತಿಸುವಂತಿಲ್ಲ.
• ತರಬೇತಿ ಕಡ್ಡಾಯ: ರಿಕವರಿ ಏಜೆಂಟ್ಗಳು ಇನ್ನು ಮುಂದೆ IIBF ನಿಂದ ವೃತ್ತಿಪರ ತರಬೇತಿ ಪಡೆಯುವುದು ಕಡ್ಡಾಯ.
• ಸಮಯದ ಮಿತಿ: ಸಂಜೆ 7 ಗಂಟೆಯ ನಂತರ ಗ್ರಾಹಕರಿಗೆ ಫೋನ್ ಮಾಡುವಂತಿಲ್ಲ.
• ವಿಶೇಷ ಸಂದರ್ಭಗಳ ಗಮನ: ಮನೆಯಲ್ಲಿ ಸಾವು ಸಂಭವಿಸಿದಾಗ, ಮದುವೆ ಅಥವಾ ಹಬ್ಬಗಳ ಸಂದರ್ಭದಲ್ಲಿ ವಸೂಲಾತಿಗಾಗಿ ಒತ್ತಡ ಹೇರುವಂತಿಲ್ಲ.
• ಹಿನ್ನೆಲೆ ತಪಾಸಣೆ: ಏಜೆಂಟ್ಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಬ್ಯಾಂಕುಗಳು ಅವರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
• ಡೇಟಾ ಸುರಕ್ಷತೆ: ಗ್ರಾಹಕರ ಖಾಸಗಿ ಮಾಹಿತಿಯನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳಬಾರದು.
ಏಜೆಂಟ್ಗಳು ಮಾಡುವ ತಪ್ಪುಗಳಿಗೆ ಅಥವಾ ಅವರ ಅಸಭ್ಯ ವರ್ತನೆಗೆ ಬ್ಯಾಂಕುಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.