https://youtube.com/shorts/2Z4I0oFUbOQ?si=E_8G5fLxr2N6s9QC
Subscribe ನ್ಯೂಸಿಕ್ಸ್ ಕನ್ನಡ
newsics.com
ಕಾನ್ಫಿಡೆಂಟ್ ಗ್ರೂಪ್ನ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಹೊಸ ಮಜಲನ್ನು ಪಡೆದುಕೊಂಡಿದ್ದು, SIT ಹಾಗೂ ಪೊಲೀಸರು ಈ ಪ್ರಕರಣವನ್ನು ಭೇದಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಎಸ್ಐಟಿ ಅಧಿಕಾರಿಗಳು ರಾಯ್ ಅವರ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿನ ಮಾಹಿತಿ ಆಧಾರದ ಮೇಲೆ ಹಾಗೂ ಅವರ ಕುಟುಂಬದ ವಿಚಾರಣೆಗಳ ಮೂಲಕ ಈ ತನಿಖೆಯನ್ನು ಮಾಡುತ್ತಿದ್ದು, ಐಟಿ ಅಧಿಕಾರಿಗಳ ವಿಚಾರಣೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ.
ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರಿಂದ (CA) ಎಸ್ಐಟಿ ಅಧಿಕಾರಿಗಳು ಪೊಲೀಸರು ಕಂಪನಿಗೆ ಸಂಬಂಧಿಸಿದ ಮಾಹಿರಿ ಪಡೆದಿದ್ದಾರೆ ಎನ್ನಲಾಗಿದೆ. ಎಸ್ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ನ ಲೆಕ್ಕ ಪರಿಶೋಧಕರಿಂದ ಕಂಪನಿಯ ವಾರ್ಷಿಕ ವಹಿವಾಟು, ಸಾಲ, ವಿದೇಶದಲ್ಲಿ ಹೂಡಿಕೆ, ಕಂಪನಿಯ ಎಲ್ಲಾ ವ್ಯವಹಾರಗಳ ಸಂಪೂರ್ಣ ಲೆಕ್ಕದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಕಾನ್ಸಿಡೆಂಟ್ ಗ್ರೂಪ್ ಕರ್ನಾಟಕ, ಕೇರಳ, ದುಬೈ ಸೇರಿದೇಶದ ಬಹುತೇಕ ಭಾಗಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿತ್ತು.
ಆದರೆ ಕಂಪನಿಯವರು ಸಂಪೂರ್ಣ ಮಾಹಿತಿ ನೀಡಲ ಕೆಲ ಸಮಯ ಬೇಕು ಎಂದಿದ್ದಾರಂತೆ. ಅಲ್ಲದೇ ಈ ಲೆಕ್ಕಗಳನ್ನು ನೋಡಿ ರಾಯ್ ಅವರು ಏನಾದರೂ ಸಾಲದಲ್ಲಿ ಇದ್ದರೇ? ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಆಯಾಮದಲ್ಲಿ ಪರಿಶೀಲಿಸಲು SIT ಈ ಕ್ರಮಕ್ಕೆ ಮುಂದಾಗಿದೆ. ಇನ್ನು, ಸದ್ಯ ವಶಡಿಸಿಕೊಂಡಿರುವರಾಯ್ ಅವರ ಫೋನ್ ಹಾಗೂ ಡೈರಿಯನ್ನು ಪೊಲೀಸರು FSL ಗೆ ಕಳುಹಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಮಾಹಿತಿ ಬರಬೇಕಿದೆ. ಆದರೆ ಐಫೋನ್ ಪಾಸ್ವರ್ಡ್ ಇರುವ ಕಾರಣ ಅದನ್ನು ಕ್ರ್ಯಾಕ್ ಮಾಡಲಾಗುತ್ತಿಲ್ಲ ಅನಿಸಬಹುದು.ಸದ್ಯ ಸಿಜೆ ರಾಯ್ ಅವರ ಸಾವಿಗೆ ಸ್ಪಷ್ಟವಾದ ಕಾರನ ಈವರೆಗೂ SIT ಅಥವಾ ಪೊಲೀಸರು ತಿಳಿಸಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ ರಾಯ್ ಸ್ವಲ್ಪ ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗುತ್ತಿದೆ. ರಿಯಲ್ ಎಸ್ಟೇಟ್ ಕುಸಿತವಾದ ಕಾರಣ ಬೇರೆ ಹೊಸ ವ್ಯವಹಾರ ಮಾಡುವ ಆಲೋಚನೆಯನ್ನೂ ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲದೇ ರಾಯ್ ದೇಶ-ವಿದೇಶಗಳಲ್ಲಿನ ಹೂಡಿಕೆಯಲ್ಲಿ ಯಾವುದೇ ಬ್ಯಾಂಕ್ ಸಾಲ ಮಾಡದಿರುವ ಕಾರಣ ಏನಾದರೂ ಅಕ್ರಮ ಹಣದಿಂದ ಈ ವ್ಯವಹಾರ ಮಾಡುತ್ತಿದ್ದರೇ ಎಂದು ತನಿಖಾ ಸಂಸ್ಥೆಗಳಿಗೆ ಶಂಕೆ ವ್ಯಕ್ತವಾಗಿದೆ.ರಾಯ್ ಅವರ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೇ ಕಾರಣ ಎಂಬ ಆರೋಪ ಬಲವಾಗಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ಕೊಚ್ಚಿಯಿಂದ ಬಂದಿರುವ ಐಆರ್ ಎಸ್ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ಐಟಿ ಅಧಿಕಾರಿಗಳ ತಂಡ ಸಿಜೆ ರಾಯ್ ಅವರ ಕಚೇರಿಗಳ ಮೇಲೆ ದಾಳಿ ನಡೆಸಿತ್ತು, ಈ ಹಿನ್ನೆಲೆಯಲ್ಲಿ ಈ ಅಧಿಕಾರಿಯ ತಂಡಕ್ಕೆ ಬೆಂಗಳೂರು ನಗರ ಬಿಟ್ಟು ತೆರಳದಂತೆ ಸೂಚನೆ ನೀಡಿದ್ದಲ್ಲದೆ, ಅವಶ್ಯಕತೆ ಬಿದ್ದಲ್ಲಿ ಹೇಳಿಕೆ ದಾಖಲಿಸುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ