https://youtube.com/shorts/Dd-eFU1bWK0?si=33BVZevxfUnn7HcU
Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವ ಪಾರ್ವತಿಯ ವಿವಾಹ ನಡೆದ ಸ್ಥಳವೆಂದು ನಂಬಲಾದ ಉತ್ತರಾಖಂಡ್ನ ತ್ರಿಯುಗಿನಾರಾಯಣ ದೇಗುಲದಲ್ಲಿ, ಜೋಡಿಯೊಂದು ತೀವ್ರ ಹಿಮಪಾತದ ನಡುವೆ ವಿವಾಹವಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
mahendrasemwal ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಮದುವೆಯ ಅಲಂಕಾರದ ಜೊತೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿರುವ ವಧು ಹಾಗೂ ಅವರ ತಮ್ಮ ಬಟ್ಟೆಯ ಮೇಲೆ ಜಾಕೆಟ್ ಧರಿಸಿದ್ದು, ಬೀಳುತ್ತಿರುವ ಮಂಜಿನ ನಡುವೆಯೇ ನಡೆದು ಹೋಗುತ್ತಿದ್ದಾರೆ.
ಹೀಗೆ ಇವರು ನಡೆದು ಹೋಗುತ್ತಿದ್ದರೆ ಮಂಜು ಮಳೆಯಂತೆ ಅಲ್ಲಿ ಬೀಳುತ್ತಲೇ ಇದೆ. ವಧುವಿನ ಉದ್ದನೇಯ ಲೆಹೆಂಗಾವನ್ನು ಮಹಿಳೆಯೊಬ್ಬರು ಆಕೆಗೆ ನಡೆದಾಡುವುದಕ್ಕೆ ಸಹಾಯವಾಗಲಿ ಎಂದು ಎತ್ತಿ ಹಿಡಿದಿದ್ದು, ಅವರ ಜೊತೆಗೆ ನಡೆದುಬಹೋಗುತ್ತಿದ್ದಾರೆ.
ಉತ್ತರಾಖಂಡ್ನ ಪ್ರಯಾಗ್ರಾಜ್ ಜಿಲ್ಲೆಯಲ್ಲಿರುವ ತ್ರಿಯುಗಿನಾರಾಯಣ ದೇಗುಲವು ಆಳವಾದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಹಿಂದೂ ಪುರಾಣಗಳಲ್ಲಿರುವ ನಂಬಿಕೆಗಳ ಪ್ರಕಾರ, ಇಲ್ಲಿ ಹಿಂದೂ ದೇವರಾದ ಶಿವ ಹಾಗೂ ಪಾರ್ವತಿ ದೇವಿ ಮದುವೆಯಾದರು ಮಹಾವಿಷ್ಣುವಿನ ಸಮ್ಮುಖದಲ್ಲಿ ಈ ಮದುವೆ ನಡೆಯಿತು ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಹಲವು ಜೋಡಿಗಳು ತಮ್ಮ ವಿವಾಹ ಬದುಕನ್ನು ಆರಂಭಿಸಲು ಇಲ್ಲಿ ಮದುವೆಯಾಗುತ್ತಾರೆ.
https://www.instagram.com/reel/DT2gwPjkyzh/?igsh=NngzNzYyZzlnbTRk