Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಳಗಾವಿ : ಜಿಲ್ಲೆಯ ಗೋಕಾಕ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ರಕ್ತಚರಿತ್ರೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಸಂಶಯ, ಮಂಗಳವಾರ ದೇವಸ್ಥಾನದ ಮುಂಭಾಗದಲ್ಲೇ ಯುವಕನೊಬ್ಬನ ಹತ್ಯೆಯಲ್ಲಿ ಅಂತ್ಯವಾದ ಘಟನೆಯೊಂದು ನಡೆದಿದೆ.
ರಾಜಾಪೂರ ಗ್ರಾಮದ ನಿವಾಸಿ ಮಂಜುನಾಥ ಸುಭಾಸ ಎಣ್ಣೆ (23) ಎಂಬ ಯುವಕನೇ ಕೊಲೆಯಾದ ದುರ್ದೈವಿ. ಈತ ತನ್ನ ತಂಗಿಯ ಜೊತೆ ಮಾತನಾಡುತ್ತಿದ್ದಾನೆ ಎಂಬ ಸಂಶಯ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಲ್ಲಿ ಮನೆಮಾಡಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಬಾಲಕನು, ಮಂಜುನಾಥನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ರೂಪಿಸಿದ್ದನು. ಜನವರಿ ದಿ.19ರಂದು ಬೆಳಿಗ್ಗಿನ ಜಾವ ಮಂಜುನಾಥನು ಗ್ರಾಮದ ವಿಠೋಬಾ ದೇವಸ್ಥಾನಕ್ಕೆ ಪೂಜೆ ಮಾಡಲು ತೆರಳಿದಾಗ, ಅಲ್ಲಿಯೇ ಹೊಂಚು ಹಾಕಿದ್ದ ಬಾಲಕನು ಕಬ್ಬಿಣದ ರಾಡ್ನಿಂದ ಆತನ ತಲೆಗೆ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಈ ಭೀಕರ ಘಟನೆಯ ಕುರಿತು ಮೃತನ ಚಿಕ್ಕಪ್ಪ ಸುರೇಶ ಅಶೋಕ ಎಣ್ಣಿ ಅವರು ನೀಡಿದ ದೂರಿನನ್ವಯ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 28/2026, ಕಲಂ 103(1) ಬಿಎನ್ಎಸ್ 2023 ರಡಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟಪ್ರಭಾ ಪೊಲೀಸ್ ನಿರೀಕ್ಷಕರಾದ ಎಚ್. ಡಿ. ಮುಲ್ಲಾ ಅವರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಯುವಕನ ಅಕಾಲಿಕ ಮರಣದಿಂದ ರಾಜಾಪೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
https://www.newsics.com/2026/01/21/student-wearing-tilak-expelled-from-school/