Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೆಲವೊಮ್ಮೆ ಆತುರದಿಂದ ಅಡುಗೆ ಮಾಡುವಾಗ ಹೆಚ್ಚು ಉಪ್ಪನ್ನು ಸೇರಿಸುತ್ತೇವೆ. ಆಗ ಏನು ಮಾಡಬೇಕೆಂದು ಕೈ ಕೈ ಹಿಸುಕಿಕೊಳ್ಳುತ್ತೇವೆ. ಏಕೆಂದರೆ ಹೆಚ್ಚು ಉಪ್ಪು ತಿನ್ನುವುದೂ ಕಷ್ಟ. ಆರೋಗ್ಯಕ್ಕೂ ಒಳ್ಳೆಯದಲ್ಲ. ಇಂತಹ ಸಮಯದಲ್ಲಿ ನಾವು ಮಾಡಿದ್ದೆಲ್ಲಾ ವೇಸ್ಟ್ ಆಯ್ತು ಎಂದು ಕೆಲವರು ಚೆಲ್ಲಬಹುದು. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. ಇಂತಹ ಸಮಯದಲ್ಲಿ ಬ್ಯಾಲೆನ್ಸ್ ಮಾಡುವ ಕೆಲವು ಟೆಕ್ನಿಕ್ ಅನ್ನು ನೀವು ಅಳವಡಿಸಿಕೊಳ್ಳಬೇಕು.
ಕಬ್ಬಿಣವು ಕಬ್ಬಿಣವನ್ನು ಕತ್ತರಿಸುವಂತೆಯೇ, ಮಸಾಲೆಗಳನ್ನು ಮಸಾಲೆಗಳು ಮಾತ್ರ ಕತ್ತರಿಸುತ್ತವೆ. ಹೆಚ್ಚುವರಿ ಉಪ್ಪನ್ನು ಕಡಿಮೆ ಮಾಡಲು ಕೆಂಪು ಮೆಣಸಿನ ಪುಡಿ ಅಥವಾ ಹಸಿರು ಮೆಣಸಿನಕಾಯಿಗಳನ್ನು ಸಾಂಬಾರ್ ಅಥವಾ ಕರಿಗೆ ಸೇರಿಸಬಹುದು.
ಆಲೂಗಡ್ಡೆ ಸ್ವಲ್ಪ ಸಿಹಿ ರುಚಿಯನ್ನು ಮತ್ತು ಮಸಾಲೆ ಹೀರಿಕೊಳ್ಳುವ ಅಂಶವನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ಸಾಂಬಾರ್ಗೆ ಆಲೂಗಡ್ಡೆಯನ್ನು ಸೇರಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಉಪ್ಪು ಕಡಿಮೆಯಾಗುವುದಲ್ಲದೆ, ಸುವಾಸನೆಯೂ ಹೆಚ್ಚಾಗುತ್ತದೆ.
ಆಲೂಗಡ್ಡೆಯ ರುಚಿ ನಿಮಗೆ ಇಷ್ಟವಾಗದಿದ್ದರೆ ಕರಿ ಅಥವಾ ಸಾಂಬಾರ್ನಲ್ಲಿ ಕಡಲೆ ಹಿಟ್ಟು ಸೇರಿಸುವುದು ಉತ್ತಮ. ಸ್ವಲ್ಪ ಕಡಲೆ ಹಿಟ್ಟು ಸೇರಿಸಿ, ಆ ನಂತರ ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. ಬೇಯಿಸಿದ ನಂತರ ಬಡಿಸಿ. ಕಡಲೆ ಹಿಟ್ಟು ಸಹ ಉಪ್ಪನ್ನು ಸಮತೋಲನಗೊಳಿಸುತ್ತದೆ.
ದೇಸಿ ತುಪ್ಪವನ್ನು ಸೇರಿಸುವುದರಿಂದ ಉಪ್ಪು, ಕೆಂಪು ಮೆಣಸಿನ ಪುಡಿ ಅಥವಾ ಗರಂ ಮಸಾಲವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸುತ್ತದೆ. ಬಡಿಸುವ ಮೊದಲು ಅಥವಾ ಆ ಸಮಯದಲ್ಲಿ ದೇಸಿ ತುಪ್ಪವನ್ನು ಸೇರಿಸಿ. ಇದು ಖಂಡಿತವಾಗಿಯೂ ಸುವಾಸನೆ ಮತ್ತು ಉಪ್ಪನ್ನು ಬ್ಯಾಲೆನ್ಸ್ ಮಾಡುತ್ತದೆ.
ನೀವು ಹೆಚ್ಚು ಮೊಸರನ್ನು ಸಹ ಬಳಸಬಹುದು. ಇದು ಖಾರವನ್ನು ಕಡಿಮೆ ಮಾಡುವುದಲ್ಲದೆ, ಉಪ್ಪನ್ನು ಬ್ಯಾಲೆನ್ಸ್ ಮಾಡುತ್ತದೆ. ನೆನಪಿಡಿ ನೀವು ಉಪ್ಪನ್ನು ಯಾವಾಗಲೂ ಮಿತವಾಗಿ ಬಳಸಿ.