Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಲ ಎನ್ನುವುದು ನಿಗೂಢ.. ಭವಿಷ್ಯ ಎನ್ನುವುದು ಒಂದು ಕತ್ತಲ ಕೋಣೆ. ಆದರೆ ಆ ಕತ್ತಲ ಕೋಣೆಯಲ್ಲಿ ಏನಿದೆ ಎಂದು ದಶಕಗಳ ಹಿಂದೆಯೇ ಕರಾರುವಕ್ಕಾಗಿ ನೋಡಬಲ್ಲ ಶಕ್ತಿ ಒಬ್ಬರಿಗಿತ್ತು. ಅದು ಬೇರೆ ಯಾರು ಅಲ್ಲ ನಾವು ನೀವು ಕೇಳಿರುವಂಥಹ ಬಾಲ್ಕನ್ ನಾಸ್ಟ್ರಾಡಾಮಸ್ ಎಂದೇ ಖ್ಯಾತರಾಗಿರುವ ಬಲ್ಗೇರಿಯಾದ ಬಾಬಾ ವಂಗಾ.
ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಾಬಾ ವಂಗಾ, ನುಡಿದಿರುವಂತಹ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅಮೆರಿಕಾದ ಮೇಲೆ ಉಗ್ರರ ದಾಳಿ, ಕೋವಿಡ್ ಸಾಂಕ್ರಾಮಿಕ ರೋಗ, ಜಲ ಪ್ರಳಯ ಹೀಗೆ ಪ್ರಮುಖ ಘಟನಾವಳಿಗಳ ಬಗ್ಗೆ ವಂಗಾ ನುಡಿದಂತಹ ಭವಿಷ್ಯಗಳು ನಿಜವಾಗಿದೆ. ಪ್ರತಿ ವರ್ಷವೂ ಇವರ ಭವಿಷ್ಯವಾಣಿ ಬಗ್ಗೆ ತಾಳೆ ನೋಡಿ ಜಗನ್ನು ನೋಡಲಾಗುತ್ತೆ, ಹೀಗಾಗಿ ಇವರ ಭಷ್ಯವಾಣಿಗೆ ಅಷ್ಟೊಂದು ಮಹತ್ವ ಇದೆ.
ಇದೀಗ ಅವರ ಭವಿಷ್ಯದ ಪ್ರಕಾರ ಹೊಸ ವರ್ಷ ಅಂದ್ರೆ 2026 ಹೇಗಿರಲಿದೆ?, ಏನೆಲ್ಲ ಘಟನೆಗಳು ಸಂಭವಿಸಲಿದೆ ಅನ್ನೋ ಕುತೂಹಲ ಮೂಡಿಸಿದ್ದು, ಭಯಾನಕ ಭವಿಷ್ಯ ಈಗ ಹೊರ ಬಿದ್ದಿದೆ. ಅವರ ಪ್ರಕಾರ, ಮುಂಬರುವ ವರ್ಷವು ಗಂಭೀರ ಬದಲಾವಣೆಗಳು ಮತ್ತು ಸವಾಲುಗಳಿಗೆ ವೇದಿಕೆಯಾಗಲಿದೆ.
ತೀವ್ರ ಆರ್ಥಿಕ ಬಿಕ್ಕಟ್ಟು, ಚಿನ್ನದ ಬೆಲೆ ಏರಿಕೆ: 2026 ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು, ಬ್ಯಾಂಕ್ ವೈಫಲ್ಯಗಳು ಮತ್ತು ಅಧಿಕ ಹಣದುಬ್ಬರ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಅಸ್ಥಿರ ಪರಿಸ್ಥಿತಿಗಳಲ್ಲಿ ಚಿನ್ನದ ಬೆಲೆಗಳು ಅನಿರೀಕ್ಷಿತವಾಗಿ ಗಗನಕ್ಕೇರುತ್ತವೆ. 25 ರಿಂದ 40 ಪ್ರತಿಶತದಷ್ಟು ಹೆಚ್ಚಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಭೀಕರ ನೈಸರ್ಗಿಕ ವಿಕೋಪಗಳು: 2026ರಲ್ಲಿ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ತೀವ್ರ ಹವಾಮಾನ ಬದಲಾವಣೆಗಳ ಸಾಧ್ಯತೆಯಿದೆ. ವಿಶ್ವದ ಭೂಪ್ರದೇಶದಲ್ಲಿ ಸುಮಾರು ಏಳರಿಂದ ಎಂಟು ಪ್ರತಿಶತವು ಈ ವಿಕೋಪಗಳಿಗೆ ತುತ್ತಾಗುತ್ತವೆ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆಯ ಪ್ರಾಬಲ್ಯ: 2026ರ ಹೊತ್ತಿಗೆ ಕೃತಕ ಬುದ್ಧಿಮತ್ತೆ ಪ್ರಮುಖ ಸ್ಥಾನದಲ್ಲಿರುತ್ತವೆ. ಕೈಗಾರಿಕೆಗಳು ಮತ್ತು ಮಾನವ ಜೀವನದ ಮೇಲೆ ಪ್ರಾಬಲ್ಯ ಸಾಧಿಸುವ ಹಂತ ತಲುಪುತ್ತದೆ ಎಂದಿದ್ದಾರೆ. ಇದು ಮನುಷ್ಯರ ಬದುಕಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದಿದ್ದಾರೆ. AI ನ ಪ್ರಸ್ತುತ ಬೆಳವಣಿಗೆ ಗಮನಿಸಿದರೆ ಅವರ ಭವಿಷ್ಯ ಸರಿಯಾಗಿದೆ ಎಂದು ಹಲವರು ನಂಬುತ್ತಾರೆ.
ರಷ್ಯಾದಿಂದ ಒಬ್ಬ ಶಕ್ತಿಶಾಲಿ ನಾಯಕ ಎಂಟ್ರಿ: ವಿಶ್ವ ವ್ಯವಹಾರಗಳನ್ನು ನೋಡಿಕೊಳ್ಳುವ ಒಬ್ಬ ಶಕ್ತಿಶಾಲಿ ನಾಯಕ ರಷ್ಯಾದಿಂದ ಹೊರಹೊಮ್ಮುತ್ತಾನೆ ಎಂದಿದ್ದಾರೆ.
ಚೀನಾದ ಪ್ರಾಬಲ್ಯ, ಭೌಗೋಳಿಕ ರಾಜಕೀಯ ಬದಲಾವಣೆ: ಚೀನಾ ಪ್ರಮುಖ ಪ್ರಾಬಲ್ಯವನ್ನು ಪಡೆಯಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಇದರಲ್ಲಿ ತೈವಾನ್ ಮೇಲೆ ನಿಯಂತ್ರಣ ಅಥವಾ ದಕ್ಷಿಣ ಚೀನಾ ಸಮುದ್ರಕ್ಕೆ ವಿಸ್ತರಣೆ ಸೇರಿರಬಹುದು.
ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ: ನವೆಂಬರ್ 2026 ರಲ್ಲಿ ಭೂಮಿಯ ವಾತಾವರಣ ಪ್ರವೇಶಿಸುವ ದೊಡ್ಡ ಬಾಹ್ಯಾಕಾಶ ನೌಕೆಯ ಮೂಲಕ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ನೇರ ಸಂಪರ್ಕ ಸಾಧ್ಯ ಎಂಬ ಅವರ ಮೊದಲ ಸಲಹೆಯು ಜಗತ್ತನ್ನು ಆಘಾತಗೊಳಿಸಿದೆ.
ಹಸಿರು ಶಕ್ತಿ: ಇಂಧನ ಕೊರತೆಯ ಸಮಸ್ಯೆಗಳ ನಡುವೆ ಪ್ರಪಂಚದಾದ್ಯಂತದ ದೇಶಗಳು ಹಸಿರು ಶಕ್ತಿಗಳು ಪರಿಣಾಮ ಬೀರಲಿವೆ. ಭವಿಷ್ಯದಲ್ಲಿ ಮಾನವ ಅಗತ್ಯಗಳನ್ನು ಪೂರೈಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.