Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆಯುತ್ತಿದ್ದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಅಹಿತಕರ ಘಟನೆ ನಡೆದಿದೆ.
ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಅವರ ಮುಖದ ಮೇಲೆ ಕಿಡಿಗೇಡಿಯೊಬ್ಬ ಲೇಸರ್ ಲೈಟ್ ಬಿಟ್ಟು ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಸಿಎಂ ಭಾಷಣ ಆರಂಭಿಸಿದಾಗಲೂ, ಭಾಷಣದ ಕೊನೆಯಲ್ಲಿ ಕೂಡ ಮತ್ತೆ ಮತ್ತೆ ಲೇಸರ್ ಲೈಟ್ ಬೀಳುತ್ತಿದ್ದು ಭದ್ರತಾ ಸಿಬ್ಬಂದಿ ತೀವ್ರ ಗಲಿಬಿಲಿಗೊಂಡರು. ಈ ಕುರಿತು ಸಿಎಂ ಭದ್ರತಾ ಸಿಬ್ಬಂದಿ ಎರಡು ಬಾರಿ ಸ್ಥಳೀಯ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ತಕ್ಷಣ ಅಲರ್ಟ್ ಆದ ಸ್ಥಳೀಯ ಪೊಲೀಸರು ಸಮಾರಂಭದ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಲೇಸರ್ ಲೈಟ್ ಬಿಡುತ್ತಿದ್ದ ವ್ಯಕ್ತಿಯನ್ನು ಗುರುತಿಸಲು ಕಾರ್ಯಾಚರಣೆ ಆರಂಭಿಸಿದರು. ಸಿಎಂ ಭದ್ರತಾ ಸಿಬ್ಬಂದಿಯ ಸೂಚನೆಯ ಮೇರೆಗೆ ಕಿಡಿಗೇಡಿಯನ್ನು ಪತ್ತೆಹಚ್ಚಿ ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಿಂದ ಕೆಲ ಕಾಲ ಸಮಾರಂಭದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಎಣ್ಣೆ ಕುಡಿಯೋ ಮೊದಲು ಗ್ಲಾಸ್ನಲ್ಲಿರುವ ಒಂದೆರಡು ಹನಿಯನ್ನ ನೆಲಕ್ಕೆ ಹಾಕೋದ್ಯಾಕೆ?