Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಂಡಿಮಂದಿರ ಕಂಟೋನ್ಮೆಂಟ್ ಪ್ರದೇಶದಲ್ಲಿ ಸುಮಾರು ಒಂಬತ್ತು ವರ್ಷಗಳಿಂದ ಸ್ಥಳೀಯರೊಂದಿಗೆ ಕುಟುಂಬದ ಸದಸ್ಯನಂತೆ ಬದುಕಿದ್ದ ಬೀದಿ ನಾಯಿಯನ್ನು ಕೊಲ್ಲಲು ಓರ್ವ ಮಹಿಳೆ ಸುಪಾರಿ ನೀಡಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.
ಡಿಸೆಂಬರ್ 5 ರಂದು ಈ ನಾಯಿಯ ಮೃತದೇಹ ಹೂತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ನಡೆಸಿದಾಗ, ಆ ಮಹಿಳೆಯ ಸಾಕು ನಾಯಿಯ ಮೇಲೆ ಈ ಬೀದಿ ನಾಯಿ ಬೊಗಳಿದ್ದ ಕಾರಣಕ್ಕೆ ಆಕೆ ಕೊಲೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ.
ಸೇನಾ ಅಧಿಕಾರಿಯ ಪತ್ನಿಯಾದ ದೆಬ್ಮಿತ್ರಾ ಅಭಿಷೇಕ್ ಪಾಲ್ ಎಂಬ ಮಹಿಳೆ ಇಬ್ಬರಿಗೆ ಸುಪಾರಿ ನೀಡಿ, ನಾಯಿಯನ್ನು ಅಪಹರಿಸಿ, ನಂತರ ಉಸಿರುಗಟ್ಟಿಸಿ ಕೊಲ್ಲಿಸಿದ್ದಾರೆ.
ಸುಪಾರಿ ಪಡೆದ ಇಬ್ಬರು ವ್ಯಕ್ತಿಗಳು ಸ್ಕೂಟರ್ನಲ್ಲಿ ನಾಯಿಯನ್ನು ಪ್ರದೇಶದಿಂದ ಹೊರಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದು ನಂತರ ಹೂತು ಹಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಎಲಿಮಿನೇಟ್ ಆಗಿಲ್ಲ ಅನ್ನೋ ಖುಷಿಗಿಂತ ಹೊಸ ಚಿಂತೆಯಲ್ಲಿ ಮುಳುಗಿದರಕ್ಷಿತಾ ಶೆಟ್ಟಿ
ಖಾಸಗಿ ಭೇಟಿಗೆ ನಿರಾಕರಿಸಿದ್ದಕ್ಕೆ ಮಾಲೀಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಗಂಡನಿಗೂ ಮನಬಂದಂತೆ ಥಳಿಸಿರುವ ಆರೋಪ