Subscribe NewsicsKannada/YouTube
newsics.com
ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದರು ವೈದ್ಯನಾಗಲು ಇಷ್ಟವಿಲ್ಲದೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.
19 ವರ್ಷದ ಅನುರಾಗ್ ಅನಿಲ್ ಬೋರ್ಕರ್ ಜೀವ ಕಳೆದುಕೊಂಡ ವಿದ್ಯಾರ್ಥಿ. ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಹೊರಡುವ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾನು ಬಲಿಪಶು. ನಾನು ವೈದ್ಯನಾಗಲು ಬಯಸುವುದಿಲ್ಲ ಎಂದು ಬರೆದು ಡೆತ್ ನೋಟ್ ಪತ್ರ ಬರೆದಿಟ್ಟಿದ್ದಾನೆ ಎಂದು ವರದಿಯಾಗಿದೆ.
ಸಿಂದೇವಾಹಿ ತಾಲ್ಲೂಕಿನ ನವರಗಾಂವ್ ನಿವಾಸಿಯಾದ ಅನುರಾಗ್ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಇತ್ತೀಚೆಗೆ ನೀಟ್ ಯುಜಿ 2025 ಪರೀಕ್ಷೆಯಲ್ಲಿ 99.99 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ. ಒಬಿಸಿ ವಿಭಾಗದಲ್ಲಿ 1475ನೇ ಅಖಿಲ ಭಾರತ ರ್ಯಾಂಕ್ ಗಳಿಸಿದ್ದ. ಈ ಯಶಸ್ಸಿನ ನಂತರ ಅನುರಾಗ್ ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ಪಡೆಯಲು ಉತ್ತರ ಪ್ರದೇಶದ ಗೋರಖ್ಪುರಕ್ಕೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದ. ಆ ದಿನವೇ ಡಾಕ್ಟರ್ ಆಗಲು ನನಗೆ ಇಷ್ಟವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಅನುರಾಗ್ ಸಾವು ನಿಗೂಢವೆನಿಸಿದೆ.
ನಿಮ್ಮ ಮಕ್ಕಳಿಗೆ ಡೈಪರ್ ಹಾಕಿದಾಗ ಚರ್ಮ ಕೆಂಪಗಾಗುತ್ತಾ? ಈ ಟಿಪ್ಸ್ ಒಮ್ಮೇ ಟ್ರೈ ಮಾಡಿ
ರೇಣುಕಾಸ್ವಾಮಿ ಹತ್ಯೆ ಕೇಸ್ : ಪ್ರಕರಣದಿಂದ ಕೈ ಬಿಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್