Subscribe NewsicsKannada/ YouTube
newsics.com
ಬೆಂಗಳೂರು: ಕರ್ನಾಟಕ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಗೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ತೀರ್ಮಾನ ಕೈಗೊಂಡಿದೆ.
ಇದರಿಂದ ಸರ್ಕಾರಕ್ಕೆ ನಿರಾಳವಾದಂತಾಗಿದೆ.
ಜಾತಿ ಗಣತಿಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ , ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ.
ಇದೇ ವೇಳೆ ನ್ಯಾಯಪೀಠ ಯಾವುದೇ ಕಾರಣಕ್ಕೂ ನೀವು ಸಾರ್ವಜನಿಕರಿಗೆ ಒತ್ತಡ ಹಾಕುವ ಹಾಗೇ ಇಲ್ಲ. ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ದತ್ತಾಂಶ ಸರ್ಕಾರ ಹೊರತುಪಡಿಸಿ ಬೇರೆ ಯಾರಿಗೂ ಕೂಡ ಲಭ್ಯವಾಗಬಾರದು.
ಗುರುವಾರ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೋರ್ಟ್, ಲಿಖಿತ ವಾದಾಂಶ ಸಲ್ಲಿಕೆಗೆ ಸೂಚಿಸಿ ವಿಚಾರಣೆಯನ್ನು ಇಂದು ಮುಂದೂಡಿತು.
ಆಯೋಗದ ಪರವಾಗಿ ಪ್ರೊ. ರವಿವರ್ಮಕುಮಾರ್ ಅವರು ವಾದ ಆರಂಭಿಸಿದರು. 5 ನಿಮಿಷವಾದ ಮಂಡಿಸಲು ಅವಕಾಶ ನೀಡುವಂತೆ ಕೋರ್ಟಿಗೆ ಮನವಿ ಮಾಡಿದರು. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ವಾದ ಮಂಡನೆ ಮಾಡಿದರು. ಶೀಘ್ರವಾದ ಮಂಡನೆ ಪೂರ್ಣಗೊಳಿಸಲು ಇದೇ ವೇಳೆ ಕೋರ್ಟ್ ಸೂಚನೆ ನೀಡಿತು. ಒಂದು ಪತ್ರ ಬಂದಿದೆ ಅದನ್ನು ನಿಮಗೆ ನೀಡುತ್ತೇನೆ ಎಂದು ಜಡ್ಜ್ ಗೆ ರವಿವರ್ಮಕುಮಾರ್ ಪತ್ರ ನೀಡಿದರು.
ಆಯೋಗದ ಸರ್ವೆಯ ವಿಧಾನವನ್ನು ಮರು ಪರಿಶೀಲಿಸಿದ್ದೇವೆ. ಸರ್ವೆ ವೇಳೆ ಮಾಹಿತಿ ನೀಡುವ ಬಲವಂತವಿಲ್ಲ. ಮನೆ ಬೀಗ ಹಾಕಿದ್ದರೆ, ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಕುಟುಂಬದವರು ಸರ್ವೆಯಲ್ಲಿ ಭಾಗವಹಿಸಲು ಬಯಸದಿದ್ದರೆ, ಹೀಗೆ ಸರ್ವೇ ಮಾಡುವವರಿಗೆ ಆಯ್ಕೆಗಳನ್ನು ನೀಡಲಾಗಿದೆ. ಮಾಹಿತಿ ನೀಡುವುದಿಲ್ಲ ವೆಂದು ಜನರು ಹೇಳಲು ಅವಕಾಶವಿದೆ ಎಂದು ರವಿವರ್ಮಕುಮಾರ್ ವಾದಿಸಿದರು.