newsics.com
ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ಸಿನಿಮಾ ನಿರ್ದೇಶಕ ಪ್ರೇಮ್ಗೆ ಎಮ್ಮೆ ಕೊಡಿಸುವುದಾಗಿ 4.5 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಖ್ಯಾತ ನಿರ್ದೇಶಕ ಪ್ರೇಮ್ ಅವರಿಗೆ ಎರಡು ಎಮ್ಮೆ ಕೊಡಿಸುವುದಾಗಿ ನಂಬಿಸಿ 4.5 ಲಕ್ಷ ಹಣ ಪಡೆದು ಆರೋಪಿ ವಂಚನೆ ಮಾಡಿದ್ದಾನೆ.
ತಮ್ಮ ಮ್ಯಾನೇಜರ್ ಮೂಲಕ ನಿರ್ದೇಶಕ ಪ್ರೇಮ್ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೈನುಗಾರಿಕೆ ಮಾಡಲು ಎರಡು ಎಮ್ಮೆ ಖರೀದಿಗೆ ಮುಂದಾಗಿದ್ದ ಪ್ರೇಮ್ ಅವರಿಗೆ ಗುಜರಾತ್ ಮೂಲದ ವನರಾಜ್ ಬಾಯ್ ಎಂಬಾತನಿಗೆ ಎಮ್ಮೆ ಖರೀದಿಗೆ ಮುಂಗಡ 25 ಸಾವಿರ ನೀಡಲಾಗಿತ್ತು. ವನರಾಜ್, ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳಿಸಿದ್ದ. ಈ ಹಿನ್ನೆಲೆಯಲ್ಲಿ ಎಮ್ಮೆ ಬರುತ್ತೆ ಎಂದು ನಂಬಿ 4.5 ಲಕ್ಷ ಹಣವನ್ನೂ ಆನ್ಲೈನ್ ಮೂಲಕ ಪ್ರೇಮ್ ರವಾನಿಸಿದ್ದರು. ಆದರೆ ಒಂದು ವಾರದಲ್ಲಿ ಎಮ್ಮೆ ಕೊಡ್ತೀನಿ ಎಂದವನು ಹಣದೊಂದಿಗೆ ಪರಾರಿ ಆಗಿದ್ದ. ಇದೀಗ ಪೊಲೀಸ್ ಠಾಣೆಗೆ ಪ್ರೇಮ್ ಅವರ ಮ್ಯಾನೇಜರ್ ಚಂದ್ರು ದೂರು ನೀಡಿದ್ದಾರೆ.
Love is blind ಗೊತ್ತಿಲ್ಲದೆ ಮಗನನ್ನೇ ಲವ್ ಮಾಡಿ ಮದುವೆಯಾದ ತಾಯಿ, ಮಕ್ಕಳಾದ ಬಳಿಕ ಸತ್ಯ ಬಹಿರಂಗ!
Gold Rate Today Bangalore: ಗುಡ್ ನ್ಯೂಸ್ ; 9,180 ರೂಗೆ ಕುಸಿದ ಚಿನ್ನದ ಬೆಲೆ; ಇಂದಿನ ದರಪಟ್ಟಿ ಇಲ್ಲಿದೆ