newsics.com
ನವದೆಹಲಿ: ಎನ್ಡಿಎ ಸರ್ಕಾರ ಮತ್ತು ಚುನಾವಣೆ ಆಯೋಗವು ಶಾಮೀಲಾಗಿ ಮತಗಳ್ಳತನ ನಡೆಸಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪವನ್ನು ಮತ್ತೆ ನಿರಾಕರಿಸಿರುವ ಚುನಾವಣೆ ಆಯೋಗ, ಅರೋಪ ಸಾಬೀತು ಮಾಡುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದೆ.
ಇದಕ್ಕಾಗಿ 7 ದಿನಗಳ ಗಡುವು ನೀಡಿದ್ದು, ಇಲ್ಲದಿದ್ದರೆ ಕ್ಷಮೆಯಾಚಿಸುವಂತೆ ಆಯೋಗ ಸೂಚಿಸಿದೆ.
ಮತಗಳವು ಆರೋಪವನ್ನು ಸಾಕ್ಷಿ ಸಮೇತ ಅಫಿಡವಿಟ್ ಮೂಲಕ 7 ದಿನಗಳೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಚುನಾವಣಾ ಆಯೋಗ ಮತ್ತೊಮ್ಮೆ ರಾಹುಲ್ ಗಾಂಧಿಗೆ ತಾಕೀತು ಮಾಡಿದೆ.
ಅಫಿಡವಿಟ್ಗೆ ಸಹಿ ಮಾಡಿ ಅಥವಾ ಕ್ಷಮೆಯಾಚಿಸಿ. ಇದು ಬಿಟ್ಟು 3ನೇ ಆಯ್ಕೆಗಳಿಲ್ಲ. ಒಂದು ವೇಳೆ 7 ದಿನಗೊಳಗಾಗಿ ರಾಹುಲ್ ಗಾಂಧಿ ಸಾಕ್ಷಿ ಸಮೇತ ಅಫಿಡವಿಟ್ ಸಲ್ಲಿಸದಿದ್ದರೆ ಆರೋಪಗಳೆಲ್ಲ ಸುಳ್ಳು ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದರು.
ದೆಹಲಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದಕ್ಕೂ ಮೊದಲು ಕಾಂಗ್ರೆಸ್ ಸಂಸದ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಹಾರದ ಸಸಾರಂನಲ್ಲಿ ವೋಟರ್ ಅಧಿಕಾರ್ ಯಾತ್ರಾ ಅಭಿಯಾನಕ್ಕೆ ಚಾಲನೆ ನೀಡಿ ಚುನಾವಣಾ ಆಯೋಗವು ತನ್ನ ಬಳಿ ಮಾತ್ರ ಅಫಿಡವಿಟ್ ಸಲ್ಲಿಸುವಂತೆ ಕೇಳಿದೆ. ಆದರೆ ಬಿಜೆಪಿ ನಾಯಕರಿಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿಲ್ಲ ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಜ್ಞಾನೇಶ್ ಕುಮಾರ್, ʼʼಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕು ಹಿಡಿದು ಮತದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವಾಗ ಚುನಾವಣಾ ಆಯೋಗವು ಮತದಾರರೊಂದಿಗೆ ನಿರ್ಭಯವಾಗಿ ನಿಂತಿದೆ. ಮತಗಳ್ಳತನ ಆಗಿದೆ ಎನ್ನುವ ಆರೋಪ ಸರಿಯಾದುದಲ್ಲ. ಸುಳ್ಳು ಹೇಳುವ ಮೂಲಕ ತಾವು ಸಂವಿಧಾನವನ್ನು ಅಪಮಾನಿಸುತ್ತಿದ್ದೀರಿʼʼ ಎಂದು ಹೇಳಿದ್ದಾರೆ.
https://twitter.com/i/status/1957036226592002171
Foxconn iPhone 17 ಬೆಂಗಳೂರಲ್ಲಿ ಫಾಕ್ಸ್ಕಾನ್ ಐಫೋನ್ 17 ಉತ್ಪಾದನೆ ಆರಂಭ