newsics.com
ರಾಯಚೂರು: ಮಂತ್ರಾಲಯದ ಗುರು ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನ ಮಹೋತ್ಸವ ನಡೆಯುತ್ತಿದ್ದು. ಇಂದೂ ಸಹ ಮಧ್ಯಾರಾಧನೆ ಅದ್ದೂರಿಯಾಗಿ ನಡೆದಿದೆ.
ಸುಬುಧೇಂದ್ರ ತೀರ್ಥರಿಂದ ಪೂಜೆ
ಇಂದು ವಿಶೇಷ ಮಹಾಪಂಚಾಮೃತ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆದಿದ್ದು, ಪೀಠಾಧಿಪತಿ ಸುಬುದೇಂದ್ರ ತೀರ್ಥರು ಈ ಪೂಜೆಗಳನ್ನ ಮಾಡಿದ್ದಾರೆ.
ಇನ್ನು ಈ ಪೂಜೆಗಳ ನಂತರ ಮಠದ ಪ್ರಾಂಗಣದಲ್ಲಿ ಗಜ, ರಜತ ಹಾಗೂ ಚಿನ್ನದ ರಥೋತ್ಸವ ಮಾಡಲಾಗಿದೆ. ಸ್ವರ್ಣ ಕವಚದಿಂದ ರಾಯರ ವೃಂದಾವನವನ್ನ ಹೂವುಗಳಿಂದ ಅಲಂಕಾರ ಮಾಡಲಾಗಿದೆ.
ರಾಯರ ವೃಂದಾವನ ಮುಂದಿನ ಎರಡು ಶಿಲಾ ಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಅಳವಡಿಸಲಾಗಿದೆ. ಗುರು ರಾಯರ ಭಕ್ತರ ದೇಣಿಗೆಯಿಂದ ತಯಾರಿಸಿದ ಕವಚಗಳು ಮೊದಲ ಬಾರಿಗೆ ಅಳವಡಿಸಲಾಗಿದೆ.
ಮಂಚಾಲಮ್ಮದೇವಿಗೆ ಸೀರೆ ಸಮರ್ಪಣೆ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಶೇಷವಸ್ತ್ರ ಸ್ವೀಕರಿಸಿ ರಾಯರ ವೃಂದಾವನಕ್ಕೆ ಸಮರ್ಪಿಸಿದ್ದಾರೆ.
Indian railway ನಾಲ್ಕೂವರೆ ಕಿಮೀ ಉದ್ದದ ರೈಲು ‘ರುದ್ರಾಸ್ತ್ರ’ದ ಮೊದಲ ಸಂಚಾರ ಸಕ್ಸಸ್!