newsics.com
ಬೆಂಗಳೂರು : ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿದ್ದುದೆ. ಆದರೆ, ಹಬ್ಬದ ಸಂತೋಷದ ನಡುವೆಯೇ ಹೂವು, ಹಣ್ಣು, ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಇದರ ಪರಿಣಾಮ ತರಕಾರಿ, ಹೂವು, ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಹೌದು, ಮಾರುಕಟ್ಟೆಗಳಲ್ಲಿ ಮಲ್ಲಿಗೆ ಹೂವು, ಕನಕಾಂಬರ, ಸೇಬು ಹಣ್ಣು ಸೇರಿದಂತೆ ಹಲವು ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಇಂದು ಬೆಂಗಳೂರಿನ ಮಾರುಕಟ್ಟೆಯಲ್ಲಿ ಕನಕಾಂಬರ 1 ಕೆಜಿಗೆ 1600ರೂ.ಇದ್ದು, ಮಲ್ಲಿಗೆ, ಮಳ್ಳೆ ಹೂವು 900ರೂ., ಕಾಕಡ ಹೂವು 800ರೂ., ಸೇವಂತಿಗೆ 800ರೂ., ಗುಲಾಬಿ 500ರೂ., ಕಣಗಲೆ 500ರೂ., ಸುಗಂಧರಾಜ 500ರೂ., ತಾವರೆ ಹೂವು (ಜೋಡಿ) 150ರೂ., ಜೋಡಿ ಬಾಳೆಕಂದು 80ರೂ.ಇದೆ.
ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಸೇಬು 300ರೂ.ಗೆ ಏರಿಕೆಯಾಗಿದ್ದು, ದಾಳಿಂಬೆ 280ರೂ, ಕಿತ್ತಳೆ 200ರೂ., ಮೂಸಂಬಿ 150ರೂ., ಸಪೋಟ 150ರೂ., ದ್ರಾಕ್ಷಿ 200ರೂ, ಸೀತಾಫಲ 200ರೂ.ಗೆ ಮಾರಾಟವಾಗಿದೆ.