newsics.com
ಇಲ್ಲೊಬ್ಬ ವ್ಯಕ್ತಿ ತನ್ನ ತಾಯಿಗಾದ ಅವಮಾನಕ್ಕೆ ಸತತ 10 ವರ್ಷಗಳ ನಂತರ, ತಾಯಿಗೆ ಅವಮಾನ ಮಾಡಿದ ವ್ಯಕ್ತಿಯನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಲಕ್ನೋ ಇಂದಿರಾ ನಗರ ಪ್ರದೇಶದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಭರ್ಜರಿ ಪಾರ್ಟಿ ಮಾಡಿದ್ದಾರೆ.
ಜೂನ್ 19 ರ ರಾತ್ರಿ 22 ವರ್ಷದ ಮನೋಜ್ ಅವರನ್ನು ಕೊಲೆ ಮಾಡಿದ್ದಕ್ಕಾಗಿ ಸೋನು ಕಶ್ಯಪ್ ಮತ್ತು ಅವರ ನಾಲ್ವರು ಸ್ನೇಹಿತರನ್ನು ಬಂಧಿಸಲಾಯಿತು.
2015 ರಲ್ಲಿ ನಡೆದ ಜಗಳವೊಂದರಲ್ಲಿ ಮನೋಜ್ ಕಶ್ಯಪ್ ಅವರ ತಾಯಿಯ ಕಪಾಳಕ್ಕೆ ಒಡೆದು ಅಲ್ಲಿಂದ ಪರಾರಿಯಾಗಿದ್ದ.ತನ್ನ ತಾಯಿಗೆ ಆದ ಅವಮಾನದಿಂದ ಅಸಮಾಧಾನಗೊಂಡು ಕೋಪಗೊಂಡ ಸೋನು ಅವನನ್ನು
ಮೇ 22 ರಂದು ಮನೋಜ್ ತನ್ನ ಅಂಗಡಿ ಮುಚ್ಚುತ್ತಿದ್ದಂತೆ ಕಶ್ಯಪ್ ತನ್ನ ಸ್ನೇಹಿತರ ಸಹಾಯದಿಂದ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ.ಸೋನು ಕಶ್ಯಪ್ ತನ್ನ ಸ್ನೇಹಿತರಾದ ರಂಜೀತ್, ಆದಿಲ್, ಸಲಾಮು ಮತ್ತು ರೆಹಮತ್ ಅಲಿ ಜೊತೆ ಸೇರಿ ಕಬ್ಬಿಣದ ರಾಡ್ಗಳಿಂದ ದಾಳಿ ಮಾಡಿದ್ದಾರೆ.ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.