newsics.com
ಬೀದರ್: ಜಿಲ್ಲೆಯ ಐತಿಹಾಸಿಕ ಗುರುದ್ವಾರಕ್ಕೆ ಇಂದು ಮತ್ತೆ ಇ-ಮೇಲ್ ಮೂಲಕ ಬಾಂಬ್ ಬ್ಲಾಸ್ಟ್ ಬೆದರಿಕೆ ಬಂದಿದೆ.
ಶನಿವಾರ ಬೆದರಿಕೆ ಮೇಲ್ ಬಂದಿತ್ತು. ಇದೀಗ ಇಂದು ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಐತಿಹಾಸಿಕ ಗುರುದ್ವಾರ ಬ್ಲಾಸ್ಟ್ ಮಾಡೇ ಮಾಡುತ್ತೆವೆಂದು ಇಮೇಲ್ ಬಂದಿದೆ
ಎಸ್ಪಿ ಪ್ರದೀಪ ಗುಂಟಿ ಸೇರಿದಂತೆ ಡಿವೈಎಸ್ ಪಿ ,ಸಿಪಿಐ ಸೇರಿದಂತೆ ಪೊಲೀಸರ ಅಧಿಕಾರಿಗಳ ತಂಡ ಗುರುದ್ವಾರಕ್ಕೆ ದೌಡಾಯಿಸಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ, ಶ್ವಾನದಳ, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.