newsics.com
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ದೋಣಿಯೊಂದು ಸಮುದ್ರದಲ್ಲಿ ಮುಳುಗಿ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಉಡುಪಿಯ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ನಡೆದಿದೆ.
ನಾಪತ್ತೆಯಾದವರನ್ನು ರೋಹಿತ್ ಖಾರ್ವಿ(38), ಸುರೇಶ ಖಾರ್ವಿ(45) ಜಗನ್ನಾಥ್ ಖಾರ್ವಿ(43) ಎಂದು ಗುರುತಿಸಲಾಗಿದೆ.ಓರ್ವ ಮೀನುಗಾರ ಪಾರಾಗಿದ್ದಾನೆ.
ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಸಮುದ್ರದಲ್ಲಿ ಕಡಲ ಅಬ್ಬರ ಜೋರಾಗಿದೆ ಈ ನಡುವೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಟ್ರಾಲ್ ದೋಣಿ ಸೆರೆಗೆ ಸಿಕ್ಕಿ ಮಗುಚಿ ಬಿದ್ದಿದೆ ಪರಿಣಾಮ ನಾಲ್ಕು ಮಂದಿ ಸಮುದ್ರ ಪಾಲಾಗಿದ್ದು ಈ ವೇಳೆ ಓರ್ವವನ್ನು ರಕ್ಷಣೆ ಮಾಡಲಾಗಿದ್ದು ಮೂವರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
YouTube Earning Rules: ಇಂದಿನಿಂದ ಯೂಟ್ಯೂಬ್ ನಲ್ಲಿ ಹೊಸ ರೂಲ್ಸ್! ಈ ರೀತಿಯ ವಿಡಿಯೋಕ್ಕೆ ದುಡ್ಡು ಬರಲ್ಲ!