newsics.com
ನಟಿ ಸರೋಜಾದೇವಿ ನಿಧನರಾಗಿದ್ದಾರೆ. ಬಹುಭಾಷಾ ನಟಿಯಾಗಿ ಮಾತ್ರವಲ್ಲ ಪೋಷಕ ನಟಿಯಾಗಿಯೂ ಅವರು ಮಿಂಚಿರುವುದು ಇದೆ. ಎಲ್ಲವೂ ಅಂದು ಕೊಂಡಂತೆಯೇ ಆಗಿದ್ದರೆ.
ಬಿ ಸರೋಜಾದೇವಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರೊಂದಿಗೆ ವಿವಾಹವಾಗಬೇಕಿತ್ತು. ಸರೋಜಾದೇವಿ ಅವರು ಯೌವನದ ಸಮಯದಲ್ಲಿ ರಾಜಕೀಯ ವ್ಯಕ್ತಿಯೊಬ್ಬರನ್ನು ಪ್ರೀತಿಸಿದ್ದರು. ಆದರೆ ಅವರು ನಟಿ ಎನ್ನುವ ಕಾರಣಕ್ಕೆ ಪ್ರಸಿದ್ಧ ರಾಜಕಾರಣಿ ಅವರ ಕುಟುಂಬದಲ್ಲಿ ವಿವಾಹಕ್ಕೆ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ವಿವಾಹ ಮುರಿದು ಬಿದ್ದಿತ್ತು ಎನ್ನಲಾಗಿದೆ.
ಈ ಪ್ರೇಮ ಪ್ರಸಂಗದ ಬಗ್ಗೆ ಎಂಎಲ್ಸಿ ವಿಶ್ವನಾಥ್ ಅವರು ಅವರ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತು.
ರಾಜಕಾರಣಿ ಹಾಗೂ ಬರಹಗಾರ ಎಚ್.ವಿಶ್ವನಾಥ್ ಅವರು, ಅವರ ಆತ್ಮಕಥನ “ಹಳ್ಳಿ ಹಕ್ಕಿಯ ಹಾಡು” ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಎಸ್.ಎಂ ಕೃಷ್ಣ ಹಾಗೂ ಬಿ. ಸರೋಜಾ ದೇವಿ ಅವರ ಪ್ರೇಮ ಪ್ರಸಂಗದ ಬಗ್ಗೆ ವಿಶ್ವನಾಥ್ ಅವರು ಉಲ್ಲೇಖಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸರೋಜಾ ದೇವಿ ಅವರು ಈ ವಿಷಯವನ್ನು ಪ್ರಸ್ತಾಪಿಸದ್ದಕ್ಕೆ ತುಸು ಗರಂ ಆಗಿದ್ದರು. ಆದರೆ ಎಸ್.ಎಂ ಕೃಷ್ಣ ಅವರು ಇರಲಿ ಬಿಡಿ ಎಂದಿದ್ದರು.
ಇನ್ನು 55 ವರ್ಷಗಳ ಹಿಂದೆ ಕರ್ನಾಟಕದ ಪ್ರಸಿದ್ಧ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿ.ಎಸ್ಎಂ ಕೃಷ್ಣ ಅವರು ಹಾಗೂ ಬಿ.ಸರೋಜಾ ದೇವಿ ಅವರ ನಡುವೆ ಮದುವೆ ಪ್ರಸ್ತಾಪವಿತ್ತು. ಈ ವಿಚಾರವನ್ನು ಇವರಿಬ್ಬರೂ ಖಚಿತಪಡಿಸಿದ್ದರು. ಸ್ವತಃ ಸರೋಜಾ ದೇವಿ ಅವರು ಸಹ ಈ ಅಫೇರ್ ವಿಷಯವನ್ನು ನಿರಾಕರಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರವು ಎಸ್.ಎಂ ಕೃಷ್ಣ ಅವರು ನಿಧನರಾದಾಗಲೂ ಭಾರೀ ಚರ್ಚೆಯಾಗಿತ್ತು. ಇಬ್ಬರೂ ಈ ಹಿಂದೆ ಈ ವಿಚಾರವಾಗಿ ನೇರವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಂಡಿದ್ದರು. ಮನೆಯವರ ತೀರ್ಮಾನವನ್ನು ಗೌರವಿಸಿ. ಅವರದ್ದೇ ಆದ ಹೊಸ ಬದುಕು ಕಟ್ಟಿಕೊಂಡಿದ್ದರು.
ಈ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಎಸ್.ಎಂ ಕೃಷ್ಣ ಅವರು ಮಹಾರಾಷ್ಟ್ರದಲ್ಲಿ ರಾಜ್ಯಪಾಲಾಗಿದ್ದರು. ಆ ಸಂದರ್ಭದಲ್ಲಿ ಅಲ್ಲೋಲ ಕಲ್ಲೋಲವೇ ಆಗಿತ್ತು.
General alert ಇನ್ಸ್ಟಾ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ವೀಕ್ಷಣೆಯಿಂದ ಮೆದುಳಿಗೆ ಹಾನಿ: ಅಧ್ಯಯನ ವರದಿ ಹೇಳಿದ್ದೇನು?