newsics.com
ಅಹಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ 265 ಮಂದಿ ಸಾವನ್ನಪ್ಪಿದ್ದಾರೆ, ಅದೃಷ್ಟವಶಾತ್ ಓರ್ವ ಪ್ರಯಾಣಿಕ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ಒಬ್ಬೊಬ್ಬರ ಹಿಂದಿನ ಕಥೆಗಳು ಮಾತ್ರ ಕರುಣಾಜನಕವಾಗಿದೆ. ಅದೇ ರೀತಿ ಲಂಡನ್ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಪತ್ನಿ ಏಳು ದಿನಗಳ ಹಿಂದೆ ಲಂಡನ್ನಲ್ಲಿ ನಿಧನರಾಗಿದ್ದು ಪತ್ನಿಯ ಚಿತಾ ಭಸ್ಮವನ್ನು ಭಾರತದಲ್ಲಿ ವಿಸರ್ಜಿಸಿ ಲಂಡನ್ ಗೆ ಹಿಂತಿರುಗುವ ವೇಳೆ ವಿಮಾನ ದುರಂತದಲ್ಲಿ ಪತಿಯೂ ದುರಂತ ಅಂತ್ಯ ಕಂಡಿದ್ದಾರೆ.
ಗುಜರಾತ್ ನ ಅಮ್ರೇಲಿಯ ವಾಡಿಯಾ ನಿವಾಸಿಯಾಗಿರುವ ಅರ್ಜುನ್ ಪಟೋಲಿಯಾ ಅವರ ಪತ್ನಿ ಭಾರತಿಬೆನ್ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ ಆದರೆ ಕಳೆದ ಏಳು ದಿನಗಳ ಹಿಂದೆ ಅರ್ಜುನ್ ಪೆಟೋಲಿಯಾ ಅವರ ಪತ್ನಿ ಭಾರತಿಬೆನ್ ನಿಧನಹೊಂದಿದ್ದಾರೆ. ಪತ್ನಿಯ ಕೊನೆಯ ಆಸೆಯಂತೆ ಆಕೆಯ ಚಿತಾ ಭಸ್ಮವನ್ನು ಭಾರತದಲ್ಲಿರುವ ತಮ್ಮ ಪೂರ್ವಜರ ಊರಿನಲ್ಲೇ ಮಾಡುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಪತಿ ಅರ್ಜುನ್ ಪತ್ನಿಯ ಚಿತಾಭಸ್ಮವನ್ನು ಅಮ್ರೇಲಿ ಜಿಲ್ಲೆಯಲ್ಲಿರುವ ಅವರ ಪೂರ್ವಜರ ಹಳ್ಳಿಯಲ್ಲಿರುವ ನದಿಯಲ್ಲಿ ವಿಸರ್ಜಿಸಿ ಗುರುವಾರ (ಜೂ.12) ರಂದು ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್ ಗೆ ತೆರಳಲು ವಿಮಾನ ಹತ್ತಿದ್ದಾರೆ ಆದರೆ ವಿಧಿಯಾಟ ಬೇರೆಯಾಗಿತ್ತು ಟೇಕ್ ಆಫ್ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಸುಟ್ಟು ಕರಕಲಾಗಿದೆ ಇದರ ಜೊತೆಗೆ ಅರ್ಜುನ್ ಕೂಡಾ ದುರಂತ ಅಂತ್ಯ ಕಂಡಿದ್ದಾರೆ.
ಅರ್ಜುನ್ ಗೆ 8 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ತಂದೆ ತಾಯಿ ಜೊತೆ ಲಂಡನ್ ನಲ್ಲಿ ವಾಸವಾಗಿದ್ದರು ಆದರೆ ದುರಾದೃಷ್ಟವಶಾತ್ ತಾಯಿ ಏಳು ದಿನದ ಮೊದಲು ನಿಧನ ಹೊಂದಿದರೆ ಆಕೆಯ ಚಿತಾ ಭಸ್ಮ ವಿಸರ್ಜಿಸಲು ಬಂದ ಪತಿಯೂ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ, ಮಕ್ಕಳು ಮಾತ್ರ ತನ್ನ ತಂದೆಯ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.
https://x.com/ChoosyBluesy/status/1933317084722688307?ref_src=twsrc%5Etfw%7Ctwcamp%5Etweetembed%7Ctwterm%5E1933317084722688307%7Ctwgr%5E48ccad7ad8778f8eae78787028afe011e4b45bb3%7Ctwcon%5Es1_c10&ref_url=https%3A%2F%2Fm.test.in%2F
Air India flight ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ; ವೈರಲ್ ವಿಡಿಯೋ ನೋಡಿ