newsics.com
ಬೆಂಗಳೂರು: ಕನ್ನಡ ಮಾತನಾಡಲು ಒಪ್ಪದೆ ದರ್ಪ ತೋರಿ ವರ್ಗಾವಣೆಗೊಂಡ ಎಸ್ಬಿಐ ಮ್ಯಾನೇಜರ್ ಪ್ರಕರಣ ಮಾಸುವ ಮುನ್ನವೇ ಐಟಿ ಕಂಪನಿ ಸಂಸ್ಥಾಪಕರೊಬ್ಬರು ತಮ್ಮ ಕಚೇರಿಯನ್ನು 6 ತಿಂಗಳೊಳಗೆ ಬೆಂಗಳೂರಿನಿಂದ ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
ಇದಕ್ಕೆ ಅವರು “ಭಾಷಾ ಅಸಂಬದ್ಧತೆ”ಯ ಕಾರಣ ನೀಡಿದ್ದಾರೆ. ಕನ್ನಡ ಮಾತನಾಡಲು ಬಾರದ ತಮ್ಮ ಉದ್ಯೋಗಿಗಳು ಕನ್ನಡಕ್ಕೆ ಬಲಿ ಪಶುಗಳಾಗುವುದು ಬೇಡ ಎಂಬ ಕಾರಣಕ್ಕೆ ಸ್ಥಳಾಂತರಕ್ಕೆ ನಿರ್ಧರಿಸಿದ್ದಾಗಿ ಹೇಳಿಕೊಂಡಿಕೊಂಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಉದ್ಯಮಿ ಕೌಶಿಕ್, ಈ ಭಾಷಾ ಅಸಂಬದ್ಧತೆಯಿಂದ ನನ್ನ ಕನ್ನಡ ಮಾತನಾಡದ ಸಿಬ್ಬಂದಿ ‘ಬಲಿಪಶು’ಗಳಾಗುವುದನ್ನು ನಾನು ಬಯಸುವುದಿಲ್ಲ” ಎಂದು ಬರೆದಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಂದಾಪುರದ ಎಸ್ಬಿಐ ಬ್ಯಾಂಕ್ ಶಾಖೆಯ ಮ್ಯಾನೇಜರ್ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದರು. ಅಲ್ಲದೆ, ಇದು ಭಾರತ, ನಾನು ಹಿಂದಿ ಮಾತನಾಡುತ್ತೇನೆ, ಕನ್ನಡವನ್ನಲ್ಲ ಎಂದು ದರ್ಪ ಮೆರೆದಿದ್ದರು. ಈ ಸಂವಾದದ ವಿಡಿಯೋ ವೈರಲ್ ಆಗಿತ್ತು. ಕನ್ನಡಪರ ಸಂಘಟನೆಗಳು ಮತ್ತು ರಾಜಕೀಯ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಬಳಿಕ ಮ್ಯಾನೇಜರ್ ವರ್ಗಾವಣೆಗೊಂಡಿದ್ದರು.
https://x.com/i/status/1925072508648398878
CET results tomorrow ನಾಳೆ ಸಿಇಟಿ ರಿಸಲ್ಟ್: ಎಲ್ಲೆಲ್ಲಿ ಸಿಗತ್ತೆ ಫಲಿತಾಂಶ?