newsics.com
ಮದುವೆಯಾಗಿ ಏಳೇ ದಿನ. ಆಗಲೇ ನವವಿವಾಹಿತೆ ಮನಸ್ಸು ಬದಲಿಸಿಬಿಟ್ಟಿದ್ದಳು.
ಏಳೇ ದಿನದಲ್ಲಿ ನವವಿವಾಹಿತೆಗೆ ಗಂಡನ ತಮ್ಮನ ಮೇಲೆ ಆಸೆಯಾಗಿಬಿಟ್ಟಿತ್ತು ಅವನನ್ನೇ ಮದುವೆಯಾಗಬೇಕೆಂದು ಹಠ ಹಿಡಿದಳು. ಗಂಡನ ತಮ್ಮನಿಗೂ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು.
ಇಂತಹ ಅಪರೂಪದ, ಅಷ್ಟೇ ವಿಚಿತ್ರದ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಅಂಬೇಡ್ಕರ್ ನಗರದ ಹನ್ಸ್ವರ್ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಹಳ್ಳಿಯಲ್ಲಿ ಮೇ 5 ರಂದು ಯುವಕನೊಬ್ಬನ ಮದುವೆ ನೆರವೇರಿತು. ಹಳ್ಳಿಯಿಂದ ಕೇವಲ 3 ಕಿ.ಮೀ. ದೂರದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಅದ್ದೂರಿಯಾಗಿ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದ. ಇಡೀ ಕುಟುಂಬ ಈ ಮದುವೆಯಿಂದ ಸಂತೋಷವಾಗಿತ್ತು. ಆದರೆ ಮನೆಗೆ ಬಂದ ಹೊಸ ಸೊಸೆಗೆ ಗಂಡನ ತಮ್ಮನ ಮೇಲೆ ಕಣ್ಣು ಹೋಯಿತು.
7 ದಿನಗಳ ನಂತರ ನವವಿವಾಹಿತೆ ತನ್ನ ತವರಿಗೆ ಹೋದಳು. ಅಲ್ಲಿ ಆಕೆಯ ಮನಸ್ಸು ಪೂರ್ಣ ಬದಲಾಯಿತು. ಗಂಡನನ್ನು ಬಿಟ್ಟು ಗಂಡನ ತಮ್ಮನ ಜತೆ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಳು. ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದಳು.
ಇದರಿಂದ ಎರಡೂ ಕುಟುಂಬಗಳಲ್ಲಿ ಗಲಾಟೆ ಶುರುವಾಯಿತು. ಎರಡೂ ಕುಟುಂಬದವರು ಆಕೆಗೆ ಬುದ್ಧಿ ಹೇಳಲು ಪ್ರಯತ್ನಿಸಿದರು, ಆದರೆ ಆಕೆ ಕೇಳಲಿಲ್ಲ. ಗಂಡನ ತಮ್ಮ ಕೂಡ ಆಕೆಯನ್ನು ಮದುವೆಯಾಗುವುದಾಗಿ ಹಠ ಹಿಡಿದ. ಇದರಿಂದ ಪಂಚಾಯಿತಿ ಕರೆಯಲಾಯಿತು. ಈ ವಿಷಯ ಪೊಲೀಸ್ ಠಾಣೆವರೆಗೂ ಹೋಯಿತು. ಆದರೆ ಕೌಟುಂಬಿಕ ವಿಷಯ ಎಂದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಸಾಕಷ್ಟು ಮಾತುಕತೆಗಳ ನಂತರ ಅವರಿಗೆ ಮದುವೆಯಾಗಲು ಅನುಮತಿ ನೀಡಲಾಯಿತು. ಗಂಡ ಕೂಡ ತನ್ನ ಒಪ್ಪಿಗೆ ನೀಡಿ ತನ್ನ ತಮ್ಮನಿಗೆ ತನ್ನ ಹೆಂಡತಿಯನ್ನೇ ಮದುವೆ ಮಾಡಿಕೊಟ್ಟ.
ಮತ್ತೆ ಮದುವೆಯಾಗಿ ಹೊಸ ಸೊಸೆ ಅತ್ತೆ ಮನೆಗೆ ಬಂದಳು. ಆದರೆ ಈ ಬಾರಿ ಬೇರೆ ಕೋಣೆಯಲ್ಲಿ ವಾಸ. ನಿಜಕ್ಕೂ ವಿಚಿತ್ರ ಘಟನೆ.
Marriage matter ಮುಹೂರ್ತದ ವೇಳೆ ಬಂತು ಫೋನ್ ಕಾಲ್: ಮದುವೆ ಬೇಡವೆಂದ ವಧು, ಮುಂದೇನಾಯ್ತು?
National Herald case ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಗೆ ಸಂಕಷ್ಟ!
Actor darshan ವಿದೇಶಿ ಬಾತುಕೋಳಿ ಸಾಕಿದ ಆರೋಪ : ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಸಮನ್ಸ್!