newsics.com
ನವದೆಹಲಿ: ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಭಯೋತ್ಪಾದಕರು ಮತ್ತು ಅವರ ಹಿತೈಷಿಗಳೆಲ್ಲರಿಗೂ ಭಾರತ ಖಡಕ್ ಸಂದೇಶವನ್ನು ರವಾನಿಸಿದೆ.
ಸುದ್ದಿಗೋಷ್ಠಿ ನಡೆಸಿದ ಡಿಜಿಎಂಒ, ಆಪರೇಷನ್ ಸಿಂದೂರ ಮತ್ತು ನಂತರ ನಡೆದ ಘಟನೆಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. ಆಪರೇಷನ್ ಸಿಂದೂರ ಕಾರ್ಯಚರಣೆಯಲ್ಲಿ 100ಕ್ಕೂ ಅಧಿಕ ಉಗ್ರರು ಸತ್ತಿರೋದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಾಗೆಯೇ ಆಪರೇಷನ್ ಸಿಂದೂರ್ ಕಾರ್ಯಚರಣೆಗೆ ಹಲವು ಸಾಕ್ಷ್ಯಗಳನ್ನು ಬಿಡುಗಡೆಗೊಳಿಸಿದರು.
ಭಾರತದಿಂದ ಖಡಕ್ ಸಂದೇಶ
ಭಯೋತ್ಪಾದಕರು ಮತ್ತು ಅವರ ಹಿತೈಷಿಗಳೆ ನಿಮಗೆ ಪಾಕಿಸ್ತಾನದ ಯಾವುದೇ ಸ್ಥಳ ಸುರಕ್ಷಿತವಾಗಿಲ್ಲ ಎಂಬ ಸಂದೇಶವನ್ನು ಕಳುಹಿಸುತ್ತಿದ್ದೇವೆ. ಯಾವುದೇ ಸ್ಥಳದಿಂದ ಉಗ್ರರಿಗೆ ತರಬೇತಿ ನೀಡಲು ಸಾಧ್ಯವಿಲ್ಲ ಮತ್ತು ಉಗ್ರ ಚಟುವಟಿಕೆ ನಡೆಸಲು ಸಾಧ್ಯವಿಲ್ಲ. ತರಬೇತಿ ಪಡೆದುಕೊಂಡು ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಡಗಿದರೂ ಅಲ್ಲಿಗೂ ನಾವು ಬರುತ್ತವೆ. ಮೇ 10ರಂದು ಯುದ್ಧ ನಿಲ್ಲಿಸಲು ಒಪ್ಪಿಕೊಂಡರೂ ಮತ್ತೆ ಡ್ರೋನ್ ಮತ್ತು ಕ್ಷಿಪಣಿಗಳನ್ನು ಕಳುಹಿಸುವ ಮೂಲಕ ಕದನವಿರಾಮದ ಉಲ್ಲಂಘನೆ ಮಾಡಿದ್ದೀರಿ. ಇದರ ಪರಿಣಾಮ ಏನಾಗಿರುತ್ತೆ ಎಂಬುವುದು ನಿಮಗೆ ಗೊತ್ತಿದೆ. ಆಪರೇಷನ್ ಸಿಂದೂರ್ ಇನ್ನು ಮುಂದುವರಿದಿದೆ ಎಂದು ಭಾರತ ಹೇಳಿದೆ.
ರಾತ್ರಿ ದಾಳಿ ನಡೆಸೋದು ಪಾಕಿಸ್ತಾನ ಚಾಳಿಯಾಗಿದೆ. ಬೆಳಗ್ಗೆ 5 ಗಂಟೆಯವರೆಗೂ ಎಲ್ಲವೂ ಶಾಂತವಾಗಿದ್ರೂ ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲ. ರಾತ್ರಿ ದಾಳಿ ನಡೆಸಿದ್ರೆ ಅದಕ್ಕೆ ನಮ್ಮ ಪ್ರತಿಕ್ರಿಯೆ ಎರಡು ಪಟ್ಟು ಅಧಿಕವಾಗಿರುತ್ತದೆ. ಭಾರತದ ಮೇಲೆ 3 ದಶಕಗಳಿಂದ ನಡೆಸುತ್ತಿರುವ ಭಯೋತ್ಪಾದಕ ದಾಳಿಗಳು ಇನ್ನು ಮುಂದೆ ಅವರ SoP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಆಗಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
NTR ಜೂ ಎನ್ ಟಿಆರ್ ಹಿಂದು ಅಲ್ಲ ಮುಸ್ಲಿಂ ಅಂತೆ! ಮೊಹಮ್ಮದ್ ಶರೀಫ್ ಖಾನ್ ಯಾರು?