newsics.com
ಬಿಸಿ ತಡೆಯಲಾಗುತ್ತಿಲ್ಲ, ಹೊರಗಡೆ ಕಾಲಿಡಲು ಆಗುತ್ತಿಲ್ಲ ಎನ್ನುವು ಮಾತುಗಳು ಇಂದಿನ ದಿನಗಳಲ್ಲಿ ಪ್ರತಿದಿನವೂ ಕೇಳಿಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಉರಿ ಬಿಸಿಲು. ಹವಾಮಾನದಲ್ಲಿ ವೈಪರಿತ್ಯ ದಿಂದಾಗಿ ಬಿಸಿಲಿನ ಝಳವು ಹೆಚ್ಚಾಗುತ್ತಿದೆ.
ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿಟ್ಟು, ಆರೋಗ್ಯವಾಗಿಡುವ ಆಹಾರಗಳನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.ಬೇಸಗೆಯಲ್ಲಿ ನಮಗೆ ಯಥೇಚ್ಛವಾಗಿ ಸಿಗುವ ಹಣ್ಣೆಂದರೆ ಅದು ಕಲ್ಲಂಗಡಿ. ಇದರಲ್ಲಿ ನೀರಿನಾಂಶವು ಅಧಿಕ ವಾಗಿದ್ದು, ಇದನ್ನು ಸೇವನೆ ಮಾಡಿದರೆ ದೇಹವು ತಂಪಾಗಿರುವುದು.
ಕಲ್ಲಂಗಡಿಯಲ್ಲಿ ಇರುವ ಲೈಕೋಪೆನೆ ಅಂಶವು ಚರ್ಮಕ್ಕೆ ಬಿಸಿಲಿನಿಂದ ಆಗುವ ಹಾನಿ ತಪ್ಪಿಸುವುದು.ಸೌತೆಕಾಯಿಯಲ್ಲಿ ಕೂಡ ಹಲವಾರು ಬಗೆಯ ಪೋಷಕಾಂಶಗಳು ಹಾಗೂ ನೀರಿನಾಂಶವು ಉತ್ತಮವಾಗಿದೆ. ಹೊಟ್ಟೆಯಲ್ಲಿ ತಂಪಾಗಿಡಲು ಇದು ಒಳ್ಳೆಯ ಆಯ್ಕೆ. ಈ ಹಣ್ಣಿನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ ಮತ್ತು ಇದನ್ನು ಬೇಸಗೆಯಲ್ಲಿ ಉಪಾಹಾರದಲ್ಲಿ ಬಳಸಿಕೊಂಡರೆ, ಆಗ ದೇಹದ ತೂಕ ಇಳಿಸಿಕೊಂಡು ದೇಹ ತಂಪಾಗಿ ಇಡಬಹುದು.
ಹಲಸಿನಹಣ್ಣನಲ್ಲಿ ಇರುವ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇದೆ. ಹಸಿ ಹಲಸಿನ ಹಣ್ಣು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು. ಆದರೆ ಮಾಗಿದ ಹಲಸಿನ ಹಣ್ಣು ದೇಹವನ್ನು ತಂಪಾಗಿ ಇಡುವುದು ಮತ್ತು ಇದರಲ್ಲಿ ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ.
ಪ್ರೊಬಯೋಟಿಕ್ ಅತ್ಯಧಿಕವಾಗಿ ಇರುವ ಮೊಸರು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಹೊಟ್ಟೆಯ ಉರಿಯೂತ ತಗ್ಗಿಸುವುದು. ಇದರಲ್ಲಿ ಕ್ಯಾಲ್ಸಿಯಂ ಕೂಡ ಉತ್ತಮ ಪ್ರಮಾಣದಲ್ಲಿದ್ದು, ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುವುದು. ಪ್ರೋಟೀನ್ ಹೊಂದಿರುವ ಮೊಸರು ಆರೋಗ್ಯಕಾರಿ ತೂಕ ನಿರ್ವಹಣೆಗೆ ಸಹಕಾರಿ ಆಗಿರುವುದು.
https://www.newsics.com/2025/04/15/what-should-pregnant-women-do-to-stimulate-the-baby-in-the-womb/