newsics.com
ನವದೆಹಲಿ: ಕೇಂದ್ರ ಸರ್ಕಾರ ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದೆ. ಭೌತಿಕ ಕಾರ್ಡ್ಗಳನ್ನು ಕೊಂಡೊಯ್ಯುವ ಅಥವಾ ನಕಲು ಪ್ರತಿಗಳನ್ನು ಸಲ್ಲಿಸುವ ಅಗತ್ಯವನ್ನು ನಿವಾರಿಸುತ್ತದೆ ಎಂದು ತಿಳಿಸಿದೆ.
ಈ ಅಪ್ಲಿಕೇಶನ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಈ ಹೊಸ ಅಪ್ಲಿಕೇಶನ್ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಪೂರ್ಣ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಫೇಸ್ ಐಡಿ ದೃಢೀಕರಣ, ಲಾಗಿನ್ ಮಾಡಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮತ್ತು ಬಳಕೆದಾರರ ಐಡಿ ಹಂಚಿಕೊಳ್ಳುವಂತಹ ವೈಶಿಷ್ಟ್ಯಗಳನ್ನು ನೋಡಬಹುದು.
ಸದ್ಯ ಆ್ಯಪ್ ಬೀಟಾ ಹಂತದಲ್ಲಿದೆ. ಈ ಆ್ಯಪ್ ಆಧಾರ್ ಪರಿಶೀಲನೆಯನ್ನು ಸರಳಗೊಳಿಸಲಿದೆ. ದುರುಪಯೋಗ ತಡೆಯುತ್ತದೆ.