newsics.com
ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಭಾರಿ ಬಿರುಗಾಳಿ ಸಿಡಿಲಿನ ಆರ್ಭಟದೊಂದಿಗೆ ವರ್ಷದ ಮೊದಲ ಮಳೆ ಆರ್ಭಟಿಸಿತು.
ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗಗಳಲ್ಲಿ ಮಳೆಯಾಗಿದ್ದು, ವಿಶೇಷವಾಗಿ ಸಕಲೇಶಪುರ ತಾಲ್ಲೂಕಿನ ಹಲವೆಡೆ ಬುಧವಾರ ಉತ್ತಮ ಮಳೆಯಾಗಿದೆ.
ಹಾಸನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಮಳೆ ನಡುವೆ ಸಾರಿಗೆ ಬಸ್ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಡಿದ್ದಾನೆ.
ಧಾರಾಕಾಳ ಮಳೆ ಬಿರುಗಾಳಿಗೆ ಹಾಸನ ನಗರದ, ಶಂಕರಮಠದಲ್ಲಿ ಬೆಳಿದ್ದಿದ್ದ ಹಲಸಿನ ಮರದ ಕೊಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಬಿಸಿಲ ಝಳದಿಂದ ತತ್ತರಿಸಿದ್ದ ಜನರ ಮೈಮನಗಳಿಗೆ ತಂಪೆರೆಯಿತು. ಸಂಜೆ 6.45ರ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಎದ್ದ ಬಿರುಗಾಳಿ ನಗರದ ಹಲವು ಬಡಾವಣೆಗಳಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು.
ದ್ವಿಚಕ್ರ ವಾಹನ ಸವಾರರು ಭಯಭೀತರಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ರಕ್ಷಣೆಗೆಂದು ಸಮೀಪದ ಕಟ್ಟಡಗಳ ಕಡೆಗೆ ತೆರಳಿ ಆಶ್ರಯಿಸಿದರು. ಕೇವಲ ಹತ್ತು ನಿಮಿಷ ಆರ್ಭಟಿಸಿದ ಮಳೆಯಿಂದ ನಗರದೆಲ್ಲೆಡೆ ತಂಪಿನ ವಾತಾವರಣ ಸೃಷ್ಟಿಯಾಯಿತು.
Know your personality ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ! ನಿಮ್ಮ ಆಯ್ಕೆಯ ವೃತ್ತ ಯಾವುದು? ನೀವೆಂಥವರು?