newsics.com
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಅನ್ನ ಪ್ರಸಾದ (ಭಕ್ತರಿಗೆ ಉಚಿತ ಆಹಾರ) ದಲ್ಲಿ ಇನ್ನು ಮುಂದೆ ಮಸಾಲಾ ವಡಾ ಕೂಡ ಸಿಗಲಿದೆ.
ಗುರುವಾರದಿಂದಲೇ ಈ ಸೇವೆ ಜಾರಿಯಾಗಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಇತರ ಅಧಿಕಾರಿಗಳು ಇಂದು ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದಂ ಭವನದಲ್ಲಿ ‘ಮಸಾಲಾ ವಡಾ’ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗುರುವಾರ ಬೆಳಗ್ಗೆ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದಂ ಭವನದಲ್ಲಿ ಭಕ್ತರಿಗೆ ರುಚಿಕರವಾದ ವಡಾ ಪ್ರಸಾದ (ಮಸಾಲಾ ವಡಾ, ಪವಿತ್ರ ಆಹಾರ) ಬಡಿಸುವ ಕಾರ್ಯಕ್ರಮಕ್ಕೆ ಬಿ.ಆರ್. ನಾಯ್ಡು ಚಾಲನೆ ನೀಡಿದರು ಎಂದು ದೇವಾಲಯದ ಆಡಳಿತ ಮಂಡಳಿಯ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅನ್ನ ಪ್ರಸಾದ ಮೆನುವಿನಲ್ಲಿ ಹೆಚ್ಚುವರಿ ತಿಂಡಿಯನ್ನು ಸೇರಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಕಳುಹಿಸಿ ಕೊಡಲಾಗಿತ್ತು. ಮುಖ್ಯಮಂತ್ರಿಗಳು ಅದನ್ನು ಅನುಮೋದಿಸಿದ್ದಾರೆ.
ಬೆಳಗ್ಗೆ 10:30 ರಿಂದ ಸಂಜೆ 4ರವರೆಗೆ ಮಸಾಲಾ ವಡೆ:
ಬೇಳೆಕಾಳು, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ಕೊತ್ತಂಬರಿ, ಪುದೀನಾ ಎಲೆಗಳು ಮತ್ತು ಇತರ ವಸ್ತುಗಳನ್ನು ಬಳಸಿ ತಯಾರಿಸಲಾದ ವಡೆಯ ಸೇರ್ಪಡೆಯು ಅನ್ನ ಪ್ರಸಾದವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ. ಅನ್ನ ಪ್ರಸಾದ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 4 ರವರೆಗೆ ಭಕ್ತರಿಗೆ 35,000 ಮಸಾಲಾ ವಡೆಗಳನ್ನು ನೀಡಲಾಗುವುದು.
ಭವಿಷ್ಯದಲ್ಲಿ ವಡೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಮತ್ತು ಭಕ್ತರಿಗೆ ಇನ್ನಷ್ಟು ರುಚಿಕರವಾದ ಆಹಾರವನ್ನು ಬಡಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷರು ಹೇಳಿದರು.
ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು 1985 ರಲ್ಲಿ ವೆಂಕಟೇಶ್ವರ ನಿತ್ಯ ಅನ್ನದಾನಂ ದತ್ತಿ ಯೋಜನೆಯನ್ನು ಪ್ರಾರಂಭಿಸಿದ್ದರು. ನಂತರ, ಇದು 1994 ರಲ್ಲಿ ಶ್ರೀ ವೆಂಕಟೇಶ್ವರ ನಿತ್ಯ ಅನ್ನದಾನಂ ಟ್ರಸ್ಟ್ ಎಂಬ ಸ್ವತಂತ್ರ ಟ್ರಸ್ಟ್ ಆಗಿ ವಿಕಸನಗೊಂಡಿತು ಮತ್ತು 2014 ರಲ್ಲಿ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್ ಆಗಿ ರೂಪಾಂತರಗೊಂಡಿತು.
ವಿಶ್ವಾದ್ಯಂತದ ಭಕ್ತರು ನೀಡುವ ದೇಣಿಗೆ, ಧನಸಹಾಯಗಳನ್ನು ಟ್ರಸ್ಟ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಡುತ್ತದೆ ಮತ್ತು ಅವುಗಳ ಮೇಲೆ ಗಳಿಸಿದ ಬಡ್ಡಿಯ ಮೂಲಕ ಭಕ್ತರಿಗೆ ಆಹಾರ ಪೂರೈಸುತ್ತದೆ. ಹೊಸ ವರ್ಷ, ವೈಕುಂಠ ಏಕಾದಶಿ, ರಥಸಪ್ತಮಿ ಮತ್ತು ಗರುಡ ಸೇವೆಯಂತಹ ಶುಭ ಸಂದರ್ಭಗಳಲ್ಲಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಉಚಿತ ಊಟ ಬಡಿಸಲಾಗುತ್ತದೆ.
Ranya Rao gold smuggling ರನ್ಯಾ ರಾವ್ ಚಿನ್ನ ಅಕ್ರಮ ಸಾಗಣೆ ಹಿಂದೆ ಕಾಣದ ಕೈವಾಡ!
Congress worker arrested ವಿದ್ಯಾರ್ಥಿನಿ ಬದಲು ಪಿಯು ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ
Devendra Fadnavis ರಾಜ್ಯದಲ್ಲಿ ವಾಸಿಸುವ ಎಲ್ಲರೂ ಮರಾಠಿ ಕಲಿಯಬೇಕು: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್
Jio hot star 1,100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಜಿಯೋ ಹಾಟ್ ಸ್ಟಾರ್