Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Astrology ಇಂದು ಸರ್ವಾರ್ಥ ಸಿದ್ಧಿಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ
ಜ್ಯೋತಿಷ್ಯಪಂಚಾಂಗಪ್ರಮುಖ

Astrology ಇಂದು ಸರ್ವಾರ್ಥ ಸಿದ್ಧಿಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ

Share
4 Min Read
SHARE

newsics.com

ಇಂದು (ಫೆಬ್ರವರಿ 23) ಭಾನುವಾರ ಸರ್ವಾರ್ಥ ಸಿದ್ದಿ ಯೋಗ, ಧನ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ರೂಪಗೊಂಡಿವೆ. ಈ ಕಾರಣದಿಂದಾಗಿ ಭಾನುವಾರ ಕೆಲವು ರಾಶಿಗಳಿಗೆ ಉತ್ತಮ ದಿನವಾಗಿರಲಿದೆ. ಸೂರ್ಯ ದೇವನ ಅನುಗ್ರಹವು ಈ ರಾಶಿಗಳ ಮೇಲಿರುವ ಸಾಧ್ಯತೆ ಹೆಚ್ಚಿದೆ.

ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನ ಪಡೆಯುವರು.

ಮೇಷ ರಾಶಿಗೆ ಸೇರಿದ ಜನರಿಗೆ ಈ ದಿನ ಪ್ರಗತಿದಾಯಕ ಮತ್ತು ಉತ್ಸಾಹವರ್ಧಕವಾಗಿರಲಿದೆ. ನಿಮ್ಮ ಕೆಲಸಗಳಲ್ಲಿ ಯಶಸ್ಸು ದೊರಕುವುದರಿಂದ ಸಂತಸದಿಂದ ಇರುವಿರಿ. ನಿಮ್ಮ ಕಾರ್ಯಗಳೆಲ್ಲವೂ ಪೂರ್ಣವಾಗುವುದು. ಇದರಿಂದಾಗಿ ನಿಮಗೆ ಲಾಭವಾಗಲಿದೆ. ನಿಮ್ಮ ಕುಟುಂಬ ಜೀವನದಲ್ಲಿ ಸುಖ, ಶಾಂತಿ ಮತ್ತು ಸಂತೋಷವಿರಲಿದೆ. ಗಂಡನ ಮನೆಯವರಿಂದ ನಿಮಗೆ ಲಾಭ ಮತ್ತು ಸಂಪೂರ್ಣ ಬೆಂಬಲ ದೊರಕುವ ಯೋಗವಿದೆ. ವ್ಯಾಪಾರವನ್ನು ಮಾಡುವ ಜನರಿಗೆ ಲಾಭದಾಯಕವಾಗಿರುವುದು. ನಿಮ್ಮ ಪ್ರಗತಿಯನ್ನು ನೋಡಿ ನಿಮ್ಮ ವಿರೋಧಿಗಳು ಮತ್ತು ಶತ್ರುಗಳು ಕೋಪಗೊಳ್ಳುವರು. ಹಾಗಾಗಿ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಸುಖ ಸಮೃದ್ಧಿಯಲ್ಲಿ ಹೆಚ್ಚಳವಾಗಲಿದೆ. ನೀವು ನಿಮಗಾಗಿ ಅಥವಾ ನಿಮ್ಮ ಮನೆಯವರಿಗೆ ಯಾವುದಾದರೂ ವಸ್ತುವನ್ನು ಖರೀದಿಸಬಹುದಾಗಿದೆ. ನಿಮ್ಮ ಸಂಗಾತಿಗೆ ಯಾವುದಾದರೂ ಉಡುಗೊರೆಯನ್ನು ನೀಡಬಹುದು. ಇದರಿಂದಾಗಿ ನಿಮ್ಮ ನಡುವಿನ ಪ್ರೀತಿ ಮತ್ತು ಬಾಂಧವ್ಯ ಉತ್ತಮವಾಗಿರುವುದು. ನಿಮ್ಮ ಆಪ್ತ ಸಂಬಂಧಿಕರ ಸಂಪೂರ್ಣ ಬೆಂಬಲ ದೊರಕುವುದು.
ನೀವು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು ಮತ್ತು ಹಸುವಿಗೆ ಬೆಲ್ಲ ಮತ್ತು ರೊಟ್ಟಿ ತಿನ್ನಿಸಬೇಕು; ನೀವು ಪ್ರಯಾಣಿಸುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಹನುಮಂತನನ್ನು ಧ್ಯಾನಿಸಿ.

ಮಿಥುನ ರಾಶಿಗೆ ಸೇರಿದ ಜನರಿಗೆ ಅದೃಷ್ಟದೊಂದಿಗೆ ಲಾಭ ದೊರಕುವ ಯೋಗವಿದೆ. ನಿಮ್ಮ ವೈವಾಹಿಕ ಜೀವನವು ಸಂತೋಷ ಮತ್ತು ಸುಖದಿಂದ ಕೂಡಿರಲಿದೆ. ನಿಮ್ಮ ಸಂಗಾತಿಯು ನಿಮಗೆ ಪ್ರತಿಯೊಂದು ವಿಷಯಗಳಲ್ಲಿಯೂ ಸಂಪೂರ್ಣ ಬೆಂಬಲವನ್ನು ನೀಡುವರು. ಯಾವುದಾದರೂ ಕುಟುಂಬ ಅಥವಾ ಮನೆಗೆ ಸಂಬಂಧಿಸಿದ ಯಾವುದಾದರೂ ಕೆಲಸವೂ ಬಹಳ ಸಮಯದಿಂದ ಅಪೂರ್ಣಗೊಂಡಿದ್ದರೆ ಅವೆಲ್ಲವೂ ಪೂರ್ಣಗೊಳ್ಳಲಿದೆ. ನಿಮ್ಮ ಮನೆಗೆ ಅತಿಥಿ ಅಥವಾ ಸ್ನೇಹಿತರ ಆಗಮನವಾಗುವುದರಿಂದ ಮನೆಯಲ್ಲಿ ಸಂತಸದ ವಾತಾವರಣ ಇರುವುದು. ನೀವು ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಸಾಮಾಜಿಕ ಕಾರ್ಯಗಳಲ್ಲಿ ನೀವು ಹೆಚ್ಚಾಗಿ ಭಾಗವಹಿಸುವುದರಿಂದ ನಿಮ್ಮ ಗೌರವ, ಖ್ಯಾತಿ ಮತ್ತು ಪ್ರತಿಷ್ಠೆ ವೃದ್ಧಿಯಾಗಲಿದೆ. ವ್ಯಾಪಾರವನ್ನು ಮಾಡುವ ಜನರಿಗೆ ಶುಭವಾಗುವುದು. ನಿಮ್ಮ ಆದಾಯದಲ್ಲಿ ವೃದ್ಧಿಯಾಗುವುದರಿಂದ ಸಂತಸದಿಂದಿರುವಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿ ಇಡುವುದು ಉತ್ತಮ. ಯಾವುದಾದರೂ ಸ್ನೇಹಿತರ ಸಹಾಯದಿಂದಾಗಿ ನೀವು ಹೆಚ್ಚು ಪ್ರಯೋಜನವನ್ನು ಪಡೆಯುವಿರಿ. ಧರ್ಮ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ.

ನೀವು ಶಿವನಿಗೆ ಹಾಲು ಅಥವಾ ಮೊಸರಿನ ಅಭಿಷೇಕ ಮಾಡಬೇಕು. ಜತೆಗೆ, ನೀವು ಅಗತ್ಯವಿರುವವರಿಗೆ ಅಕ್ಕಿಯನ್ನು ದಾನ ಮಾಡಬೇಕು. ನೀವು ಒಳ್ಳೆಯ ಕಾರಣಕ್ಕಾಗಿ ಪ್ರಯಾಣಿಸುತ್ತಿದ್ದರೆ, ಏಲಕ್ಕಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕು.

ಕನ್ಯಾ ರಾಶಿಗೆ ಸೇರಿದ ಜನರ ಸುಖ, ಸಮೃದ್ಧಿ ಹೆಚ್ಚಾಗಲಿದೆ. ಇದರೊಂದಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವುದರಿಂದ ನಿಮ್ಮ ಪ್ರತಿ ಕೆಲಸವೂ ಪೂರ್ಣಗೊಳ್ಳಲಿದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಗೌರವ, ಖ್ಯಾತಿ ಮತ್ತು ಪ್ರತಿಷ್ಠೆ ವೃದ್ಧಿಯಾಗುವುದು. ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ನಿಮ್ಮ ಪ್ರಯತ್ನಗಳಿಂದ ಪೂರ್ಣಗೊಳ್ಳುವುದರಿಂದ ನೀವು ಯಶಸ್ಸನ್ನು ಸಾಧಿಸುವಿರಿ. ಫ್ಯಾಷನ್, ಬಟ್ಟೆ, ಆಭರಣ, ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡುವ ಜನರಿಗೆ ವಿಶೇಷವಾಗಿ ಲಾಭದಾಯಕವಾಗಿರಲಿದೆ. ನಿಮಗೆ ಯಾರಿಂದಲಾದರೂ ಉಡುಗೊರೆ ದೊರಕಬಹುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಕನ್ಯಾ ರಾಶಿಗೆ ಸೇರಿದ ವಿದ್ಯಾರ್ಥಿಗಳು ಸಕಾರಾತ್ಮಕ ಫಲಿತಾಂಶವನ್ನು ಪಡೆಯುವರು. ಈ ಮೊದಲೇ ಮಾಡಿದಂತಹ ಕೆಲಸಗಳಿಂದ ನಿಮಗೆ ಹೆಚ್ಚಿನ ಪ್ರಯೋಜನ ದೊರಕಲಿದೆ. ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಯೋಗವು ಕೂಡಿಬರುವುದು.

ನೀವು ದುರ್ಗಾ ಸಪ್ತಶತಿಯ 11ನೇ ಅಧ್ಯಾಯವನ್ನು ಪಠಿಸಬೇಕು. ನೀವು ಪ್ರಯಾಣಿಸುತ್ತಿದ್ದರೆ, ನೀವು ಹೋಗುವ ಮೊದಲು ತಾಯಿಯ ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದ ಪಡೆಯಬೇಕು.

ಕುಂಭ ರಾಶಿಗೆ ಸೇರಿದ ಜನರು ಕುಟುಂಬ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅದೃಷ್ಟಶಾಲಿಯಾಗಿರುವರು. ಮನೆಯ ಎಲ್ಲಾ ಸದಸ್ಯರ ಸಂಪೂರ್ಣ ಬೆಂಬಲ ದೊರಕುವುದು. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಎಲ್ಲರ ಬೆಂಬಲವನ್ನು ಪಡೆಯುವಿರಿ. ಆರ್ಥಿಕ ವಿಷಯವಾಗಿ ಕುಂಭ ರಾಶಿಗೆ ಸೇರಿದ ಜನರು ಅದೃಷ್ಟಶಾಲಿಯಾಗಿರುವರು. ನಿಮಗೆ ಹಠಾತ್ ಧನ ಲಾಭವಾಗುವ ಯೋಗವಿದೆ. ಯಾವುದಾದರೂ ಆಸ್ತಿಗೆ ಸಂಬಂಧಿಸಿದಂತಹ ಕೆಲಸಗಳಿಂದ ನೀವು ವಿಶೇಷವಾಗಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಗೃಹ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೆ ಅನುಕೂಲಕರ ಮತ್ತು ಶುಭವಾಗಿರಲಿದೆ. ಕಿರಾಣಿ ವ್ಯಾಪಾರಿಗಳಿಗೆ ಆದಾಯದಲ್ಲಿ ವೃದ್ಧಿಯಾಗುವುದರಿಂದ ಸಂತಸದಿಂದಿರುವಿರಿ. ಪ್ರೀತಿಯಲ್ಲಿರುವ ಕುಂಭ ರಾಶಿಯವರಿಗೆ ಬಹಳ ಉತ್ತಮವಾದ ದಿನವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವ ಅವಕಾಶ ದೊರಕುವುದು. ಸಾಮಾಜಿಕ ಕ್ಷೇತ್ರದಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗುವ ಯೋಗವಿದೆ. ನೀವು ಲಕ್ಷ್ಮಿ ದೇವಿಗೆ ಖೀರ್ ಅರ್ಪಿಸಬೇಕು ಮತ್ತು ಶ್ರೀಸೂಕ್ತವನ್ನು ಪಠಿಸಬೇಕು.

ಮೀನ ರಾಶಿಗೆ ಸೇರಿದ ಜನರಿಗೆ ಸೂರ್ಯ ದೇವನಿಂದ ಸಂತೋಷಮಯವಾದ ದಿನವಾಗಿರಲಿದೆ. ನಿಮ್ಮ ಗೌರವ, ಖ್ಯಾತಿ ಮತ್ತು ಪ್ರತಿಷ್ಠೆಯಲ್ಲಿ ಬಹಳಷ್ಟು ವೃದ್ಧಿಯಾಗಲಿದೆ. ನಿಮ್ಮ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯವನ್ನು ಆಯೋಜಿಸಬಹುದಾಗಿದೆ. ಮನೆಯ ಯಾವುದಾದರೂ ಸದಸ್ಯರಿಗೆ ವಿವಾಹ ಯೋಗ ಕೂಡಿ ಬರುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಮೀನ ರಾಶಿಗೆ ಸೇರಿದ ಜನರಿಗೆ ಲಾಭದಾಯಕವಾಗಿರುವುದು. ನಿಮ್ಮ ಕಿರಿಯ ಸಹೋದರ, ಸಹೋದರಿಯರ ಸಂಪೂರ್ಣ ಬೆಂಬಲ ಪಡೆಯುವಿರಿ. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಸಂತಸದಿಂದಿರುವಿರಿ. ನಿಮ್ಮ ಸಂಗಾತಿಯೊಂದಿಗೆ ಶಾಪಿಂಗ್‌ಗೆ ತೆರಳುವ ಅವಕಾಶ ದೊರಕುವುದು. ನಾಳೆ ನಿಮ್ಮ ಸುಖ, ಸಮೃದ್ಧಿ ಹೆಚ್ಚಾಗುವುದರಿಂದ ಸಂತಸದಿಂದಿರವಿರಿ. ನಿಮ್ಮ ಮಕ್ಕಳು ಶಿಕ್ಷಣಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವರು. ಯಾವುದಾದರೂ ಸ್ನೇಹಿತರನ್ನು ಹಠಾತ್ ಭೇಟಿಯಾಗುವುದರಿಂದ ನೀವು ಸಂತಸದಿಂದಿರುವಿರಿ. ನಿಮ್ಮ ತಂದೆ ತಾಯಿಯ ಆರೋಗ್ಯ ಕೆಲವು ದಿನಗಳಿಂದ ಉತ್ತಮವಾಗಿಲ್ಲದಿದ್ದರೆ, ಅವರ ಆರೋಗ್ಯದಲ್ಲಿ ಸುಧಾರಣೆಯನ್ನು ಹೊಂದುವುದರಿಂದ ನೀವು ಸಂತಸದಿಂದಿರುವಿರಿ.
ನೀವು ಸಾಧ್ಯವಾದಷ್ಟು ಗಾಯತ್ರಿ ಮಂತ್ರವನ್ನು ಪಠಿಸಬೇಕು.

Today’s almanac & prediction | ಇಂದಿನ ಪಂಚಾಂಗ+ ರಾಶಿ ಭವಿಷ್ಯ, 23-02-2025, ಭಾನುವಾರ

TAGGED:Today is a great luck for this zodiac sign
Share This Article
Facebook Twitter Copy Link Print
Previous Article Today’s almanac & prediction | ಇಂದಿನ ಪಂಚಾಂಗ+ ರಾಶಿ ಭವಿಷ್ಯ, 23-02-2025, ಭಾನುವಾರ
Next Article Mukesh Ambani ಅಂಬಾನಿ ಮನೆಯ ಕೆಲಸಕ್ಕೆ ಸಿಬ್ಬಂದಿಯನ್ನು ಹೇಗೆ ನೇಮಿಸಿಕೊಳ್ಳುತ್ತಾರೆ?

Popular Posts

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

You Might Also Like

ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?