newsics.com
ಇಂದು ಬುಧವಾರ (ಫೆಬ್ರವರಿ 19). ಬುಧ ಗ್ರಹ ಮತ್ತು ಸೂರ್ಯನ ಸಂಯೋಗದಿಂದಾಗಿ ಬುಧಾದಿತ್ಯ ಯೋಗ ರೂಪಗೊಳ್ಳುತ್ತವೆ. ಜತೆಗೆ ಚಂದ್ರನು ಸ್ವಾತಿ ಮತ್ತು ವಿಶಾಖ ನಕ್ಷತ್ರದಲ್ಲಿ ಚಲಿಸುವುದರೊಂದಿಗೆ ವೃದ್ಧಿ ಯೋಗದ ಜತೆಗೆ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ.
ಇದರಿಂದಾಗಿ ಕೆಲವು ರಾಶಿಗಳವರು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ದಿಯೊಂದಿಗೆ ಅವರ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಈ ರಾಶಿಗಳ ಜತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ಗಣೇಶನ ಕೃಪೆಗೆ ನೀವು ಪಾತ್ರರಾಗಬಹುದು, ಇದರಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ, ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.
ವೃಷಭ ರಾಶಿಗೆ ಸೇರಿದ ಜನರಿಗೆ ಇಂದು ಪ್ರಗತಿದಾಯಕವಾಗಿರುವುದು. ನಿಮಗೆ ಪ್ರಗತಿ ಮತ್ತು ಯಶಸ್ಸು ದೊರಕುವುದರೊಂದಿಗೆ ನಿಮ್ಮ ವಿರೋಧಿಗಳು ಮತ್ತು ಶತ್ರುಗಳ ವಿರುದ್ಧ ಜಯವನ್ನು ಗಳಿಸುವುದರಿಂದ ಅವರು ನಿಮ್ಮನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆಸೆಗಳು ಈಡೇರುವುದರಿಂದ ಮನಸ್ಸು ಸಂತಸದಲ್ಲಿರುವುದು. ಹೊಸ ವಾಹನ ಮತ್ತು ಮನೆಯನ್ನು ಖರೀದಿಸಬೇಕೆಂದು ಪ್ರಯತ್ನಪಡುತ್ತಿದ್ದರೆ, ಬುಧವಾರ ವಿಶೇಷವಾಗಿ ಅನುಕೂಲಕರವಾಗಿರುವುದು. ನೀವು ಬ್ಯಾಂಕಿನಿಂದ ಲೋನ್ ಪಡೆಯಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಅಡೆತಡೆಗಳು ದೂರವಾಗಿ ನಿಮಗೆ ಲೋನ್ ದೊರಕುವುದರಲ್ಲಿ ಯಶಸ್ಸು ಲಭಿಸುವುದು. ಈ ರಾಶಿಗೆ ಸೇರಿದ ಜನರು ಸ್ವಲ್ಪ ಸಮಯದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇಂದು ನಿಮ್ಮ ಆರೋಗ್ಯ ಸುಧಾರಿಸುವ ಯೋಗವಿದೆ. ಇಂದು ಸಂಜೆಯ ಸಮಯ ನಿಮಗೆ ವಿಶೇಷವಾಗಿ ಅನುಕೂಲಕರವಾಗಿರುವುದು. ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಂಡಂತಹ ಯಾತ್ರೆಗಳು ಯಶಸ್ವಿಯಾಗುವುದರೊಂದಿಗೆ ಸುಖಮಯವಾಗಿರಲಿದೆ. ಗಂಡನ ಮನೆಯವರಿಂದ ನಿಮಗೆ ಲಾಭ ಮತ್ತು ಸಂಪೂರ್ಣ ಬೆಂಬಲ ದೊರಕುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ನೆಲೆಸಲಿದೆ.
ಪರಿಹಾರ: ಇಂದಿನ ದಿನವನ್ನು ಶುಭವಾಗಿಡಲು ನೀವು ಹಸುವಿಗೆ ಪಾಲಕ್ ಅಥವಾ ಹಸಿರು ಹುಲ್ಲನ್ನು ತಿನ್ನಿಸಬೇಕು. ನೀವು ಒಳ್ಳೆಯ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದರೆ, ನಿಮ್ಮ ತಾಯಿಯ ಆಶೀರ್ವಾದ ಪಡೆಯುವುದು ನಿಮಗೆ ಶುಭವಾಗಿರುತ್ತದೆ. ನೀವು ನಿಮ್ಮ ತಂಗಿಗೆ ಉಡುಗೊರೆಯನ್ನು ನೀಡಬೇಕು.
ಕನ್ಯಾ ರಾಶಿಗೆ ಸೇರಿದ ಜನರಿಗೆ ನಾಳೆ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಶುಭ ಮತ್ತು ಲಾಭದಾಯಕವಾಗಿರುವುದು. ಇಂದು ನೀವು ಹೊಸ ಕೆಲಸವನ್ನು ಶುರು ಮಾಡಬಹುದಾಗಿದೆ. ನಿಮ್ಮ ಯೋಜನೆಗಳೆಲ್ಲವೂ ಯಶಸ್ಸು ಗಳಿಸುವುದು. ವ್ಯಾಪಾರದಲ್ಲಿ ಹೂಡಿಕೆಗಳಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ನಿಮ್ಮ ಆದಾಯದಲ್ಲಿ ಸಾಕಷ್ಟು ವೃದ್ಧಿಯಾಗುವುದರಿಂದ ನಿಮ್ಮ ಮನಸ್ಸು ಸಂತಸದಲ್ಲಿ ಇರುವುದು. ಇಂದು ಕನ್ಯಾ ರಾಶಿಗೆ ಸೇರಿದ ಜನರು ತಮ್ಮ ಸಾಮರ್ಥ್ಯ ಮತ್ತು ಅನುಭವಗಳಿಂದಾಗಿ ಕೆಲಸ ಸ್ಥಳದಲ್ಲಿ ಲಾಭವನ್ನು ಪಡೆಯುವರು. ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ನೀವು ಮಾಡುತ್ತಿದ್ದರೆ, ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದರೆ, ಅಕೌಂಟ್ಗೆ ಸಂಬಂಧಿಸಿದ ಕೆಲಸ ಅಥವಾ ಬರವಣಿಗೆ ಮತ್ತು ಕಲೆಗೆ ಸಂಬಂಧಿಸಿದ ಜನರಿಗೆ ಇಂದು ಲಾಭದಾಯಕವಾಗಿರುವುದು. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ನಿಮಗೆ ಶುಭ ಮತ್ತು ಲಾಭದಾಯಕವಾಗಿರಲಿದೆ. ನಿಮ್ಮ ಕುಟುಂಬ ಜೀವನದಲ್ಲಿ ತಂದೆ, ತಾಯಿಯ ಸಂಪೂರ್ಣ ಬೆಂಬಲ ಮತ್ತು ಸ್ನೇಹ ದೊರಕುವುದು. ಕನ್ಯಾ ರಾಶಿಗೆ ಸೇರಿದ ಜನರ ವೈವಾಹಿಕ ಜೀವನ ಬಹಳಷ್ಟು ಅನುಕೂಲಕರವಾಗಿದ್ದು ಸಂತೋಷ ದೊರಕುವುದು.
ಪರಿಹಾರ: ನೀವು ಗಣೇಶ ಅಥರ್ವಶೀರ್ಷವನ್ನು ಪಠಿಸಬೇಕು ಮತ್ತು ನೀವು ಉತ್ತಮ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದರೆ, ನೀವು ಹೋಗುವ ಮೊದಲು ಸೋಂಪು ಮತ್ತು ಸಕ್ಕರೆಯನ್ನು ಸೇವಿಸಿ.
ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಸಕಾರಾತ್ಮಕ ಬದಲಾವಣೆಯಾಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳಾಗುವುದರಿಂದ ನಿಮಗೆ ಲಾಭ ದೊರಕುವುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಜತೆಗೆ ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮಗೆ ಹೊಸ ಹೊಸ ಮಾರ್ಗಗಳು ಗೋಚರಿಸುವವು. ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಇಂದು ಪೂರ್ಣಗೊಳ್ಳುವುದು. ವಿದೇಶಕ್ಕೆ ಪ್ರಯಾಣಿಸಬೇಕೆಂದು ಪ್ರಯತ್ನವನ್ನು ಪಡುತ್ತಿರುವ ಈ ರಾಶಿಯವರಿಗೆ ಇಂದು ಸರ್ಕಾರಾತ್ಮಕವಾದ ದಿನವಾಗಿರುವುದು. ಕೆಲಸವನ್ನು ಮಾಡುವ ಜನರು ವಿಶೇಷವಾಗಿ ಎಲ್ಲರ ಸಂಪೂರ್ಣ ಬೆಂಬಲವನ್ನು ಪಡೆಯುವರು. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿರುವವರ ಅಪೂರ್ಣ ಕೆಲಸಗಳೆಲ್ಲವೂ ಇಂದು ಪೂರ್ಣಗೊಳ್ಳುವ ಸಂಭವವಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಂದು ನೀವು ಯಶಸ್ಸು ಗಳಿಸುವಿರಿ. ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಅಕ್ಕಪಕ್ಕದ ಮನೆಯವರು ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲ ನಿಮಗೆ ದೊರಕುವುದು. ನಿಮ್ಮ ಸುಖ ಸಮೃದ್ಧಿ ವೃದ್ಧಿಯಾಗುವ ಸಂಭವ ಹೆಚ್ಚಾಗಿದೆ.
ಪರಿಹಾರ: ಇಂದಿನ ದಿನವನ್ನು ಶುಭವಾಗಿಡಲು ನೀವು ಮೊಸರಿನೊಂದಿಗೆ ಶಿವನಿಗೆ ಅಭಿಷೇಕ ಮಾಡಬೇಕು. ನೀವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದರೆ, ನಿಮ್ಮ ಮನಸ್ಸಿನಲ್ಲಿ ಗಣೇಶನನ್ನು ಧ್ಯಾನಿಸಿ, ಮತ್ತು ನೀವು ಅಡೆತಡೆಗಳಿಂದ ರಕ್ಷಿಸಲ್ಪಡುತ್ತೀರಿ.
ಮೀನ ರಾಶಿಗೆ ಸೇರಿದ ಜನರಿಗೆ ಇಂದು ಯಶಸ್ಸು ದೊರಕುವುದರೊಂದಿಗೆ ಸಕಾರಾತ್ಮಕವಾದ ದಿನವಾಗಿರುವುದು. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಯಶಸ್ಸು ಗಳಿಸುವಿರಿ. ನಿಮಗೆ ಪ್ರತಿಯೊಂದು ಹೆಜ್ಜೆಯಲ್ಲಿ ನಿಮ್ಮ ಸಂಗಾತಿ ಮತ್ತು ಮನೆಯ ಎಲ್ಲಾ ಸದಸ್ಯರ ಸಂಪೂರ್ಣ ಬೆಂಬಲ ದೊರಕಬಹುದು. ಕೆಲಸದ ಸ್ಥಳದಲ್ಲಿ ಪ್ರಗತಿ ಸಾಧಿಸುವಿರಿ. ಸಹೋದ್ಯೋಗಿಗಳು ಮತ್ತು ಮಿತ್ರರೊಂದಿಗೆ ನೀವು ಸಂತೋಷಮಯವಾದ ಕ್ಷಣಗಳನ್ನು ಕಳೆಯುವಿರಿ. ನೀವು ಯಾವುದಾದರೂ ಆಸ್ತಿ ಮತ್ತು ವಾಹನವನ್ನು ಖರೀದಿಸಬೇಕೆಂದು ಪ್ರಯತ್ನ ಪಡುತ್ತಿದ್ದರೆ, ಇಂದು ನಿಮಗೆ ಶುಭ ದಿನವಾಗಿರುವುದು. ಅದೃಷ್ಟದ ಸಂಪೂರ್ಣ ಬೆಂಬಲದಿಂದಾಗಿ ನೀವು ಯಶಸ್ಸು ಗಳಿಸುವಿರಿ. ಈ ರಾಶಿಗೆ ಸೇರಿದ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಆರೋಗ್ಯ ಸುಧಾರಿಸಲಿದೆ. ತಂದೆ ತಾಯಿಯರಿಂದ ವಿಶೇಷವಾಗಿ ಹೆಚ್ಚಿನ ಪ್ರಯೋಜನವಾಗುವುದು. ಅಜ್ಜ, ಅಜ್ಜಿಯಿಂದ ನಿಮಗೆ ಉತ್ತಮ ಲಾಭ ಮತ್ತು ಬೆಂಬಲ ದೊರಕುವುದು. ದೀರ್ಘಕಾಲೀನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಂದು ಉತ್ತಮ ದಿನವಾಗಿರುವುದು. ಅತ್ಯಂತ ಹೆಚ್ಚಿನ ಲಾಭ ದೊರಕಲಿದೆ. ನಿಮಗೆ ಪರಿಚಿತರ ಮತ್ತು ಸ್ನೇಹಿತರ ಸಹಾಯದಿಂದ ಲಾಭ ದೊರಕುವ ಯೋಗವಿದೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸದಲ್ಲಿ ನಿಮಗೆ ಅಪರಿಚಿತರ ಸಹಾಯ ದೊರಕುವುದು.
ಪರಿಹಾರ: ಇಂದಿನ ದಿನವನ್ನು ಶುಭವಾಗಿಡಲು ನೀವು ಓಂ ಗಣಪತಯೇ ನಮಃ ಎಂಬ ಮಂತ್ರವನ್ನು ಸಾಧ್ಯವಾದಷ್ಟು ಬಾರಿ ಪಠಿಸಬೇಕು. ಜತೆಗೆ, ಗಣೇಶನಿಗೆ 11 ಗರಿಕೆ ಹುಲ್ಲನ್ನು ಅರ್ಪಿಸಿ. ನೀವು ಪ್ರಯಾಣಿಸುತ್ತಿದ್ದರೆ, ಇಂದು ನಿಮ್ಮ ಜೇಬಿನಲ್ಲಿ ಹಸಿರು ಕರವಸ್ತ್ರವನ್ನು ಇಟ್ಟುಕೊಳ್ಳಬೇಕು.
Today’s Prediction ಶುಭೋದಯ, 19-02-2025, ಬುಧವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?