newsics.com
ಅಮರಾವತಿ: ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಹಾಗೂ ಅವರ ಸಹೋದರ ವೈ.ಎಸ್. ಜಗನ್ ಮೋಹನ್ ರೆಡ್ಡಿ ನಡುವಿನ ಆಸ್ತಿ ಹಂಚಿಕೆ ವಿಚಾರದಲ್ಲಿ ತೀವ್ರ ಪೈಪೋಟಿ ನಡೆದಿದೆ.
ಹೀಗಾಗಿ ಶರ್ಮಿಳಾ ಅವರಿಗೆ ಒದಗಿಸಿರುವ ಭದ್ರತೆ ಹೆಚ್ಚಿಸಬೇಕು ಎಂದು ಆಂಧ್ರಪ್ರದೇಶ ಕಾಂಗ್ರೆಸ್ ನಾಯಕರೊಬ್ಬರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಎಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಎನ್ ರಾಜಾ ಅವರು ಡಿಜಿಪಿ ಸಿಎಚ್ ದ್ವಾರಕಾ ತಿರುಮಲ ರಾವ್ ಅವರಿಗೆ ಪತ್ರ ಬರೆದು, ಶರ್ಮಿಳಾ ಅವರಿಗೆ ಭದ್ರತೆಯನ್ನು ‘ವೈ’ ಶ್ರೇಣಿಗೆ ಹೆಚ್ಚಿಸಬೇಕು ಮತ್ತು 4+4 ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಸ್ತುತ ಶರ್ಮಿಳಾ ಅವರಿಗೆ ತೆಲಂಗಾಣದಲ್ಲಿ ವೈ ಶ್ರೇಣಿಯ ಭದ್ರತೆ ಇದೆ. ಆಂಧ್ರ ಪ್ರದೇಶದಲ್ಲೂ ಅದನ್ನು ವಿಸ್ತರಿಸಬೇಕು. ಅಂತೆಯೇ ಅವರ ಭದ್ರತಾ ವ್ಯವಸ್ಥೆಯನ್ನು 2 + 2 ರಿಂದ 4 + 4 ಕ್ಕೆ ಹೆಚ್ಚಿಸುವಂತೆ ಡಿಜಿಪಿಗೆ ಮನವಿ ಮಾಡಿದ್ದಾರೆ.
ಇದು ಹೆಚ್ಚು ದೃಢವಾದ ಭದ್ರತೆಯನ್ನು ಒದಗಿಸುತ್ತದೆ. ವಿಶೇಷವಾಗಿ ದೊಡ್ಡ ರಾಜಕೀಯ ಸಮಾರಂಭ, ಸಾರ್ವಜನಿಕ ಸಭೆಗಳಲ್ಲಿ ಸಂಭಾವ್ಯ ಬೆದರಿಕೆ ನಿಭಾಯಿಸಲು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತದೆ
.
ಮತ್ತದೇ ಆಸ್ಪತ್ರೆಗೆ ನಟ ದರ್ಶನ್ ದಾಖಲು, ಚಿಕಿತ್ಸೆ ಆರಂಭ, ವಾರದೊಳಗೆ ಹೈಕೋರ್ಟ್ಗೆ ವೈದ್ಯಕೀಯ ವರದಿ