newsics.com
ಮುಂಬೈ: ಬುಧವಾರ ರಾತ್ರಿ ನಿಧನರಾದ ಮೇರು ಉದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಹೇಗೆ ನಡೆಯುತ್ತದೆಂಬ ಗೊಂದಲಕ್ಕೆ ಟಾಟಾ ಟ್ರಸ್ಟ್ ತೆರೆ ಎಳೆದಿದೆ.
ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ಮುಂಬೈನ ಕೋಲ್ಬಾದಲ್ಲಿನ ಅವರ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿಂದ ಅಂತಿಮ ಮೆರವಣಿಗೆ ಮೂಲಕ ಅವರ ಪಾರ್ಥಿವ ಶರೀರವನ್ನು ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತದೆ.
ರತನ್ ಟಾಟಾ ಅವರನ್ನು ಪಾರ್ಸಿ ಪದ್ಧತಿ ಪ್ರಕಾರ ದಹನ ಮಾಡಲಾಗುತ್ತದೆಯೇ, ಇಲ್ಲವೇ ಎಂಬುದರ ಕುರಿತು ಇದ್ದ ಗೊಂದಲವನ್ನು ಟಾಟಾ ಟ್ರಸ್ಟ್ ಹೇಳಿಕೆ ಮೂಲಕ ಪರಿಹರಿಸಿದೆ.
ಪಾರ್ಸಿಗಳು ಹಿಂದು, ಮುಸ್ಲಿಮರಂತೆ ಶವಸಂಸ್ಕಾರ ಮಾಡಲ್ಲ. ಇವರ ಈ ಸಂಪ್ರದಾಯ 3 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಇವರು ಸ್ಮಶಾನವನ್ನು ದಖ್ಮಾ ಅಥವಾ ಟವರ್ ಆಫ್ ಸೈಲೆನ್ಸ್ ಎನ್ನುತ್ತಾರೆ. ಈ ಜನಾಂಗದಲ್ಲಿ ಯಾರಾದರೂ ಮೃತಪಟ್ಟರೆ ಭೌತಿಕ ದೇಹ ಶುದ್ಧೀಕರಿಸುವ ಪ್ರಕ್ರಿಯೆ ಮಾಡುತ್ತಾರೆ. ನಂತರ, ಅವರ ದೇಹವನ್ನು ಟವರ್ ಆಫ್ ಸೈಲೆನ್ಸ್ನ ತೆರೆದ ಸ್ಥಳದಲ್ಲಿ ಇಡಲಾಗುತ್ತದೆ. ಪಾರ್ಸಿಯ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ದೋಖ್ಮೆನಾಶಿ ಎನ್ನಲಾಗುತ್ತದೆ.
ಪಾರ್ಸಿ ಜನಾಂಗದಲ್ಲಿ ಮೃತ ದೇಹಗಳನ್ನು ಆಕಾಶದಲ್ಲಿ ಹೂಳಲಾಗುತ್ತದೆ (Sky Burials). ಅಂದರೆ ಮೃತದೇಹವನ್ನು ಸೂರ್ಯರಶ್ಮಿಗೆ ಹಾಗೂ ಮಾಂಸಾಹಾರಿ ಪಕ್ಷಿಗಳಿಗೆ ಆಹಾರವಾಗಲಿ ಎಂದು ಎತ್ತರದ ಪ್ರದೇಶದಲ್ಲಿಡಲಾಗುತ್ತದೆ. ಇದರ ಅರ್ಥ ಮನುಷ್ಯ ಮರಣದ ನಂತರವೂ ಪರೋಪಕಾರಿ ಆಗಿರಲಿ ಎನ್ನುವುದೇ ಆಗಿದೆ. ಈ ಪಾರ್ಸಿ ಸಮುದಾಯದಂತೆ ಬೌದ್ಧರು ಕೂಡ ಮೃತದೇಹಗಳನ್ನು ರಣಹದ್ದುಗಳಿಗೆ ಆಹಾರವಾಗಿ ನೀಡುತ್ತಾರೆ.
ಆದರೆ ಬದಲಾದ ಪರಿಸ್ಥಿತಿಯಲ್ಲಿ ಮೃತದೇಹ ತಿನ್ನುವ ರಣಹದ್ದು ಸೇರಿ ಇತರ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಪಾರ್ಸಿ ವಿಧಾನದ ಬದಲು ದಹನ ಮಾಡಲು ನಿರ್ಧರಿಸಲಾಗಿದೆ ಎಂದು ಟಾಟಾ ಟ್ರಸ್ಟ್ ತಿಳಿಸಿದೆ.
ಮುಂಬೈನ ವರ್ಲಿಯ ಚಿತಾಗಾರದಲ್ಲಿ ದಹನ ಕ್ರಿಯೆ ಮೂಲಕ ರತನ್ ಟಾಟಾ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ.
55 ವರ್ಷ ಕಿರಿಯ ವ್ಯಕ್ತಿ ಜತೆ ರತನ್ ಟಾಟಾ ಸ್ನೇಹ! ಆಪ್ತ ಗೆಳೆಯನ ನಡುವಿನ ಬಂಧ ಶುರುವಾಗಿದ್ದು ಹೇಗೆ..?
ಬೆಂಗಳೂರಿನ ಏರ್ ಶೋ ಎಂದರೆ ರತನ್ ಟಾಟಾಗೆ ಪಂಚಪ್ರಾಣ: ಅವರ ಉತ್ಸಾಹಕ್ಕೆ ದೇಶವೇ ಬೆರಗಾಗಿತ್ತು!
3800 ಕೋಟಿ ಸ್ವತ್ತಿನ ರತನ್ ಟಾಟಾ ಸಾಮ್ರಾಜ್ಯಕ್ಕೆ ವಾರಸುದಾರರು ಯಾರು? ಮಾಯಾ ಟಾಟಾ ಮಾಡ್ತಾರಾ ಮ್ಯಾಜಿಕ್?