newsics.com
ಬಳ್ಳಾರಿ: ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ್ದ ನಟ ದರ್ಶನ್ ಅವರನ್ನು ಜೈಲಿನ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ.
ಮೊದಲಿನಿಂದಲೂ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಲೇ ಇರುವ ದರ್ಶನ್, ಕೊಲೆ ಕೇಸ್ ವಿಚಾರವಾಗಿ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿದ್ದಾರೆ. ಇದೇ ಹತಾಶೆಯಿಂದಲೇ ಗುರುವಾರ ಬಳ್ಳಾರಿ ಜೈಲಿನಲ್ಲಿ ವಕೀಲರ ಭೇಟಿಗೆ ವಿಸಿಟರ್ಸ್ ರೂಂಗೆ ಬರುವಾಗ ಮಾಧ್ಯಮಗಳ ಕ್ಯಾಮರಾ ಕಂಡೊಡನೆ ದರ್ಶನ್ ಅಸಭ್ಯವಾಗಿ ವರ್ತಿಸಿದ್ದರು.
ದರ್ಶನ್ ಅವರ ಈ ವಿಡಿಯೋಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ಹಲವರು ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ ಎಂದು ದರ್ಶನ್ ಅವರನ್ನು ಟೀಕಿಸಿದ್ದರು.
ಈ ವಿಚಾರ ವಿವಾದವಾಗುತ್ತಿದ್ದಂತೆ ಜೈಲಿನಲ್ಲಿ ಪೊಲೀಸರು ದರ್ಶನ್ ಅವರನ್ನು ವಿಚಾರಣೆ ಮಾಡಿದ್ದಾರೆ. ಈ ಸನ್ನೆ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದರ್ಶನ್, ನಾನು ಹಾಗೆ ಮಾಡಿಯೇ ಇಲ್ಲ. ಎಲ್ಲದಕ್ಕೂ ನೀವು ಯಾಕೆ ನನ್ನನ್ನು ತಪ್ಪು ತಿಳಿಯುತ್ತೀರಿ. ಅಷ್ಟಕ್ಕೂ ಮಾಧ್ಯಮಗಳು ಯಾಕೆ ಯಾವಾಗಲೂ ಜೈಲಿನ ಬಳಿ ಇರ್ತಾರೆ ಎಂದು ಮರುಪ್ರಶ್ನೆ ಮಾಡಿದ್ದಾರೆನ್ನಲಾಗಿದೆ.
ಹದಿಹರೆಯದವರು ಬಳಸುತ್ತಿಲ್ವಂತೆ ಕಾಂಡೋಮ್; ಹಾಗಾದ್ರೆ ಸುರಕ್ಷತೆಗೆ ಮಾಡ್ತಿರೋದೇನು?
SSLC ಪರೀಕ್ಷೆಗಿಲ್ಲ ಅವಧಿ ಕಡಿತ, ದ್ವಿತೀಯ ಪಿಯುಸಿ ಪರೀಕ್ಷೆಗೆ ಮಾತ್ರ ಸೀಮಿತ